Tuesday 24 April 2012

ನಾಯಂಡಹಳ್ಳಿ- ಒಂದು ಲಲಿತ ಪ್ರಬಂಧ


ನಾಯಂಡಹಳ್ಳಿ ಬೆಂಗಳೂರಿನಿಂದ  ಮೈಸೂರಿಗೆ ಹೋಗುವ ದಾರಿಯಲ್ಲಿರುವ ಪ್ರಮುಖ ಜಂಕ್ಷನ್ ಗಳಲ್ಲಿ ಒಂದು , ಎಂದು ಸಂಕ್ಷಿಪ್ತವಾಗಿ ಹೇಳಿ ಮುಗಿಸಲು ನನ್ನ ಮನಸ್ಸು ಒಪ್ಪುತ್ತಿಲ್ಲ .


ಈ ಮಾರ್ಗವಾಗಿ ಸಂಚರಿಸುವ ಪ್ರತಿಯೊಬ್ಬರಿಗೂ , ನಾಯಂಡಹಳ್ಳಿ ತನ್ನ 'ಟ್ರಾಫಿಕ್ ಜಾಮ್' , 'ಸಿಗ್ನಲ್' ಗಳ ರುಚಿಯನ್ನು ಖಂಡಿತ ತೋರಿಸಿರುತ್ತದೆ. ಇದಕ್ಕೆ ಬಸ್ಸು,ಲಾರಿ,ಕಾರು,ಆಟೋ ,ದ್ವಿಚಾಕ್ರ ವಾಹನ,ಆಂಬುಲೆನ್ಸ್,ಶವ ಹೊರುವ ಗಾಡಿ ಎಂಬಿತ್ಯಾದಿ ಯಾವುದೇ ವಿನಾಯ್ತಿಗಳಿಲ್ಲ . "ನಾಯಂಡಹಳ್ಳಿ"ಯನ್ನು ಹಾದು ಹೋಗುವ ಪ್ರತಿಯೊಬ್ಬರೂ ತನಗೆ ಗೌರವ ಸೂಚಿಸುವಂತವರಾಗಿ 'ಕೆಲ ಘಳಿಗೆ' ನಿಂತು, ತಲೆ ಬಾಗಿ ತಮ್ಮ ಪ್ರಯಾಣವನ್ನು ಮುಂದುವರಿಸಬೇಕೆಂದು ಅದು ಇಚ್ಚಿಸುತ್ತದೇನೋ - ಎಂಬಂತೆ ನನಗೆ ಭಾಸವಾಗಿದೆ . ಆದರೆ ಈ 'ಕೆಲ ಘಳಿಗೆ' ಎಷ್ಟೆಂಬುದನ್ನು ನಾವು ಹುಲು ಮಾನವರು ನಿರ್ಧಾರ ಮಾಡುವಂತದಲ್ಲ . ಸ್ವತಃ "ನಾಯಂಡಹಳ್ಳಿ ಅಧಿಪತಿ"ಯೇ ತನ್ನ "ಮೂಡ್"ಗೆ ಅನುಗುಣವಾಗಿ ಅದನ್ನು ವಿಧಿಸುತ್ತಾನೆ . ಅವನ "ಮೂಡ್" ಈಗ ಇದ್ದಂತೆ ಮತ್ತೊಂದು ಘಂಟೆಯಲ್ಲಿರುವುದಿಲ್ಲ ! ಅದರಂತೆ, ಅಲ್ಲಿರುವ 'ಟ್ರಾಫಿಕ್ ಸ್ಟೇಟಸ್ ' ಸದಾ ಬದಲಾವಣೆಗೆ ಒಳಪಟ್ಟಿರುತ್ತದೆ . ಈ ನನ್ನ ಕಲ್ಪನಾ-ಲಹರಿ ಗೆ ಇಂಬು ಕೊಡುವಂತೆ , ಅದೇ ಮಾರ್ಗವಾಗಿ ಸಂಚರಿಸುವ ನನ್ನ ಮಿತ್ರರು ಕೆಲವೊಮ್ಮೆ ಆಡುವ ಮಾತುಗಳು ಉಲ್ಲೇಖನೀಯ -

" ನಾನು ೮.೩೦ ರ ಸುಮಾರಿಗೆ ನಾಯಂಡಹಳ್ಳಿಗೆ ಬಂದಾಗ , ಯಾವುದೇ ಟ್ರಾಫಿಕ್ ಜಾಮ್ ಇರ್ಲಿಲ್ವಲ್ಲಾ ! ನೀವು ೮.೪೫ ರ ಸುಮಾರಿಗೆ ಬಂದಾಗ ಅದು ಹೇಗೆ ಅಷ್ಟು ಟ್ರಾಫಿಕ್ ಜಾಮ್ ಆಯಿತು ? " .



ಇಲ್ಲಿ ,ನಾವು ಕನಿಷ್ಟವೆಂದರೂ ಸುಮಾರು ೧೦ ನಿಮಿಷ , ಆ 'ವೃಷಭಾವತಿ ತೀರ'ದಲ್ಲಿ ,ಆ ಕೊಳಚೆ ನೀರಿನಿಂದ ಬರುವ 'ಪರಿಮಳವನ್ನೂ' ಆಸ್ವಾದಿಸುತ್ತಾ ,ವಾಹನಗಳು ಹೊರಸೂಸುವ ಹೊಗೆಯ 'ಕಂಪನ್ನೂ' ಸವಿಯುತ್ತಾ , ಮತ್ತೂ ಬೇಸಿಗೆಯಾದರೆ ಸೂರ್ಯನ 'ವಿಶ್ವರೂಪ ದರ್ಶನ'ವನ್ನೂ ಪಡೆಯುತ್ತಾ ನಮ್ಮ ವಾಹನಗಳಲ್ಲೋ,ಬುಸ್ಸುಗಳಲ್ಲಿಯೋ ಕಾಯಬೇಕಾಗುತ್ತದೆ . ಇಲ್ಲಿನ ಗರಿಷ್ಟ ಕಾಯುವಿಕೆಯ ಸಮಯದ ಬಗ್ಗೆ ತಿಳಿಸುವಷ್ಟು ನಾನು ಶಕ್ತನಲ್ಲ . ಇಲ್ಲಿ ನಾವು ಮುಕ್ಕಾಲಿಂದ ಒಂದು ಘಂಟೆ ಕಾದದ್ದು ಉಂಟು . ಒಟ್ಟಿನಲ್ಲಿ, ನಮ್ಮ ಈ ಕರುಣಾಜನಕ ಸ್ಥಿತಿಯನ್ನು ಕಂಡು " ನಾಯಂಡಹಳ್ಳಿ ಮಹಾರಾಜ"ನಿಗೆ ಮರುಕ ಹುಟ್ಟಿದರೆ ಮಾತ್ರ ಸಿಗ್ನಲ್ಲು ಗಳು , ಟ್ರಾಫಿಕ್ ಜಾಮ್ ಗಳು 'ಕ್ಲಿಯರ್' ಆಗುತ್ತವೆ .ಇಲ್ಲದಿದ್ದರೆ ಇಲ್ಲ !



ಈ ನಾಯಂಡಹಳ್ಳಿಯ ಪರಾಕ್ರಮವನ್ನು ಅರಿಯದ ಅನೇಕ ಮಂದಿ ಪೊಲೀಸರು ಟ್ರಾಫಿಕ್ ಅನ್ನು ತಮ್ಮ ಹಿಡಿತಕ್ಕೆ ತರಲು ಶತಾಯ-ಗತಾಯ ಪ್ರಯತ್ನಿಸುವುದು , ಅವರ ಪ್ರಯತ್ನದಲ್ಲಿ ವಿಫಲರಾಗುವುದು - ಇಲ್ಲಿ ಸರ್ವೇಸಾಮಾನ್ಯ .


ಇಂತಹ ನಾಯಂಡಹಳ್ಳಿಯ ಐಂದ್ರಜಾಲಿಕ ಬಲೆಯಿಂದ ತಪ್ಪಿಸಿಕೊಂಡು- ಅರ್ಥಾತ್ ಒಂದು ಸಿಗ್ನಲಿನಲ್ಲೂ ನಿಲ್ಲದೇ "ವಾಹನಗಳ ಸಮುದ್ರವನ್ನು" ಸುಲಭವಾಗಿ ದಾಟಿ ತಮ್ಮ-ತಮ್ಮ ದಡವನ್ನು ಸೇರುವವರು ಅಂದಿನ ದಿನ ಬಹಳ ಅದೃಷ್ಟವಂತರೇ ಸರಿ ! ಅವರನ್ನು ನೋಡಿ ನಮ್ಮ ಮಹಾರಾಜನು ತನ್ನ ಸಹಜವಾದ ರಾಕ್ಷಸ ನಗೆಯನ್ನು ಬೀರುತ್ತಾ " ಇಂದು ನಿನ್ನ ಗ್ರಹ-ಗತಿಗಳು ಸರಿಯಾಗಿದ್ದವು ... ತಪ್ಪಿಸಿಕೊಂಡೆ ... ಇಂದು ಹೋಗು ... ನಾಳೆ ನೋಡಿ-ಕೊಳ್ಳು(ಲ್ಲು)ತ್ತೇನೆ " ಎಂದು ಹೇಳಿದಂತೆ ತೋರುತ್ತದೆ .


ಅದೃಷ್ಟ ಸದಾ ಒಂದು 'ಬಡ್ಡಿ ಮಗ' ನಾಗಿ ಪರಿಣಮಿಸುವ ನನಗೆ ; ಇಲ್ಲಿನ ೩-೪ ಸಿಗ್ನಲ್ಲು ಗಳ ಬಲೆಯಲ್ಲಿ ಸಿಲುಕಿರುವುದೂ ಉಂಟು . ಮಿಗಿಲಾಗಿ, ಒಮ್ಮೆ ನಾನು ನಮ್ಮ ಮಹಾರಾಜನ ಅವಕೃಪೆಗೆ ಪಾತ್ರವಾಗಿ , ಈ ವಾಹನ ದಟ್ಟಣೆಯಲ್ಲಿ ಸಿಲುಕಿ "ಅಲ್ಗೊರಿಥಮ್ಸ್" ಕಿರು ಪರೀಕ್ಷೆಗೆ ತಡವಾಗಿ ಹಾಜರಾಗಿ ಕೆಲವೇ-ಕೆಲವು ಪ್ರಶ್ನೆಗಳಿಗೆ ಉತ್ತರಿಸಲು ಸಾಧ್ಯವಾಯಿತು - ಇಂತಹ ಘಟನೆಗಳನ್ನು ನೆನಪಿಸಿಕೊಂಡರೆ ನಮ್ಮ ಮಹಾರಾಜ ಎಂಥವರಿಗೂ ನೀರಿಳಿಸಬಿಡಬಲ್ಲ ಎಂಬ ತೀರ್ಪಿಗೆ ಬರಬಹುದು .



ನಾಯಂಡಹಳ್ಳಿ ಮಹಾರಾಜನ ಪರಾಕ್ರಮವನ್ನು ತಿಳಿದ ನಮ್ಮಂತಹ ಹಲವರು ಒಂದು ಅನಧಿಕೃತ ದುಂಡು-ಮೇಜಿನ ಸಭೆಯನ್ನು ಕರೆದಿದ್ದೆವು . ಸಭೆಯಲ್ಲಿ ತೆಗೆದುಕೊಂಡ ಒಂದು ಪ್ರಮುಖ ನಿರ್ಧಾರವೆಂದರೆ- ನಮ್ಮ ಸಮಯವನ್ನು ಇನ್ನು ಮೇಲೆ "ಇಂಡಿಯನ್ ಸ್ಟಾಂಡರ್ಡ್ ಟೈಮ್"ನಿಂದ  "ನಾಯಂಡಹಳ್ಳಿ ಸ್ಟಾಂಡರ್ಡ್ ಟೈಮ್" ಗೆ ಬದಲಿಸುವುದು . ಇತ್ತೀಚೆಗೆ ಈ ಮಾರ್ಗವಾಗಿ ಸಂಚರಿಸುವ ಹೆಚ್ಚಿನವರು "ನಾಯಂಡಹಳ್ಳಿ ಸ್ಟಾಂಡರ್ಡ್ ಟೈಮ್ " ಅನ್ನು ಬಳಸುತ್ತಿದ್ದಾರೆ ಎಂದು ತಿಳಿದು ಬಂದಿದೆ . ಮತ್ತೂ ನಮ್ಮ ಕಾಲೇಜುಗಳಲ್ಲಿ , ಹಲವಾರು ಕಛೇರಿಗಳಲ್ಲಿ ನಾವು ತಡವಾಗಿ ಬಂದಿದಕ್ಕೆ ಕಾರಣ ಕೇಳಿದಾಗ ಕೇವಲ " ನಾಯಂಡಹಳ್ಳಿ" ಎಂದು ಉತ್ತರಿಸಿದರೂ ಸಾಕು - ನಮ್ಮ ಪ್ರೊಫೆಸರ್ ಗಳು ,ಬಾಸ್ ಗಳು "ಮಹಾರಾಜನ ಪರಾಕ್ರಮ"ವನ್ನು ಅರಿತು ಮುಂದೆ ಮಾತು ಬೆಳೆಸಲು ಹಿಂಜರಿಯುತ್ತಾರೆ .



ನಾಯಂಡಹಳ್ಳಿ , ತನ್ನ ಮೂಲಕ ಹಾದು ಹೋಗುವವರ ಜೀವನದಲ್ಲಿ ಹಲವು ಪಾತ್ರವನ್ನು ವಹಿಸುತ್ತಿದೆ . ಕೆಲವರಿಗೆ ಇದು ಮಾರ್ಗ ಬದಲಿಸುವ ಜಂಕ್ಷನ್ . ಕಾಲೇಜಿಗೆ ಹೋಗುವ ಪಡ್ಡೆ ಹುಡುಗರಿಗೆ , ಇಲ್ಲಿ ರೂಟ್ ಬದಲಿಸುವ ತಮ್ಮ ಪ್ರೇಯಸಿಗಾಗಿ ಕಾಯಬೇಕಾದ ನಿಲ್ದಾಣ . ಬಸ್ಸಿನಲ್ಲಿ ಕೆಲವು ವಯಸ್ಕರು 'ಸಿಗ್ನಲ್ ಕಾಯುವಿಕೆ'ಯ ನೋವನ್ನು ನೀಗಿಸಲು ಅಕ್ಕ-ಪಕ್ಕದವರೊಡನೆ ಲೋಕಾಭಿರಾಮವಾಗಿ ಚರ್ಚೆ ಶುರು ಮಾಡುವ ಶುಭ ಸ್ಥಳ . ಬಸ್ಸಿನ ನಿರ್ವಾಹಕನಿಗೆ ಎಲ್ಲರ ಬಳಿಯೂ ಟಿಕೆಟೋ -ಪಾಸೋ ಇದೆಯೇ ಎಂದು ಖಾತರಿ ಪಡಿಸಿಕೊಳ್ಳಲು ಮುಂದೆ-ಹಿಂದೆ ಪರೇಡ್ ಪ್ರಾರಂಭಿಸುವುದೂ ಇಲ್ಲಿಯೇ ! ಇತರೇ ವಾಹನಗಳಿಗೆ , ತಾವು "ಎಷ್ಟು ನಿಧಾನವಾಗಿ ಓದಿಸಬಲ್ಲೆವು ? " ಮತ್ತು " ತಮ್ಮ ಕೊಂಬು ( ಹಾರ್ನ್ ) ಎಷ್ಟು ಗರಿಷ್ಟ ಶಬ್ದ ಉತ್ಪಾದನೆ ಮಾಡಬಹುದು ?" - ಇವೇ ಮುಂತಾದ ಜ್ಞಾನೋದಯವಾಗುವ ಪ್ರದೇಶ ! ಪಾದಚಾರಿಗಳಿಗೆ , ಒಮ್ಮೆ ದೇವರನ್ನು ನೆನೆದು , ಉಸಿರನ್ನು ಬಿಗಿ ಹಿಡಿದುಕೊಂಡು , ಮಾನವ ಪ್ರಕೃತಿಗೆ ಕೊಟ್ಟ "ವಾಯು-ಶಬ್ದ ಮಾಲಿನ್ಯ" ಎಂಬ ಉಡುಗೊರೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸುತ್ತಾ , ಅತ್ತ -ಇತ್ತ ಸುಮಾರು ೫-೧೦ ಬಾರಿ ಕತ್ತು ಆಡಿಸಿ , ಭಗವಂತ ತಮಗೆ ಇತ್ತ ಕಾಲುಗಳಲ್ಲೇ ಅಲ್ಲಿನ ಕೊಳಚೆ ಪ್ರದೆಶವನ್ನೂ , ವಾಹನಗಳ ಸಮುದ್ರವನ್ನೂ ಈಜಿ ತಮ್ಮ-ತಮ್ಮ ದಡ ಸೇರುವ ವಿಸ್ಮಯಕಾರಿ ಪ್ರದೇಶ . ಇನ್ನೊಂದು ಭರವಸೆಯ ಮಾತೇನೆಂದರೆ , ಕೆಲವರು ವಾಹನಗಳ ಸಹವಾಸವೇ ಬೇಡವೆಂದು ಕಾಲ್ನಡಿಗೆಯಲ್ಲೇ "ಟ್ರಾಫಿಕ್ ಜ್ಯಾಮ್" ಅನ್ನು ಬೆಳಿಗ್ಗೆ-ಸಂಜೆ ದಾಟುವವರಿಗೆ ಯಾವುದೇ ಡಯಟಿಂಗ್ ನ ಅವಶ್ಯಕತೆ ಬೀಳುವುದಿಲ್ಲ . ಬೆವರು ಇಳಿಸಿ-ತೂಕ ಕಡಿಮೆ ಮಾಡುವ ಉಚಿತ ಸೇವೆಯನ್ನು ನಾಯಂಡಹಳ್ಳಿ ನಡೆಸುತ್ತಿದೆ .




ಇತರರಿಗೆ ನಾಯಂಡಹಳ್ಳಿ ಹೇಗಾದರೂ ಪರಿಣಮಿಸಲಿ . ನನಗಂತೂ ರಾ.ವಿ ಕಾಲೇಜ್ ಎಂಬ ಯಮಲೋಕಕ್ಕೆ ಪ್ರತಿ ನಿತ್ಯ ಹೋಗಲು , ದಾಟಲೇಬೇಕಾದ ವೈತರಣಿ ನದಿಯ ಸದೃಶ ! ಹಾಗೂ, ಇಲ್ಲಿನ ಜನ-ಜಂಗುಳಿ , ಅಸಂಖ್ಯಾತ ವಾಹನಗಳ ಓಡಾಟ - ಅವುಗಳಿಂದಾಗುವ ಸಂಚಾರ ದಟ್ಟಣೆ , ಆಗುತ್ತಿರುವ ಶಬ್ದ-ವಾಯು ಮಾಲಿನ್ಯ - ಇವುಗಳ್ಳೆಲ್ಲವನ್ನೂ ಎಷ್ಟು ಶಾಂತ ಚಿತ್ತದಿಂದ ಸಹಿಸುತ್ತಿರುವ ಭೂತಾಯಿಯನ್ನು "ಕ್ಷಮಯಾ ಧರಿತ್ರಿ" ಎಂಬುದಾಗಿ ಸ್ತುತಿಸುತ್ತಾರೇಕೆ ಎಂಬ ಪ್ರಶ್ನೆಗೆ ಇಲ್ಲಿ ಉತ್ತರ ಕಂಡುಕೊಂಡಿದ್ದೇನೆ !



ನಾಯಂಡಹಳ್ಳಿಯಲ್ಲಿ "ಕುಡುಕನ ಶಾಪ" :



ಬಸ್ಸು ಎಂಬುದು ಕೇವಲ ನಮ್ಮನ್ನು ಗಮ್ಯಸ್ಥಾನಕ್ಕೆ ಸೇರಿಸುವ ಒಂದು ಮಾನವ ನಿರ್ಮಿತ ವಾಹನವೆಂದು ನನಗೆ ಅನಿಸುವುದಿಲ್ಲ . ಬದಲಿಗೆ , ಯಾವುದೇ ಮಾನವ ನಿರ್ಮಿತ ಬೇಧಗಳಿಲ್ಲದೇ , ವಿವಿಧ ರೀತಿಯ ಜನರ , ಅವರ ಸಂಸ್ಕೃತಿ-ಸಂಪ್ರದಾಯಗಳ ,ಆಚಾರ-ವಿಚಾರಗಳ ,ವೇಷ-ಭೂಷಣಗಳ ಸಮಾಗಮ ಕ್ಷೇತ್ರ . ಒಂದು ತರಹದ 'ಪುಟಾಣಿ ಜಗತ್ತೇ' ಸರಿ ! ಇಲ್ಲಿ - ಕೆಲವು ಸಹಪ್ರಯಾಣಿಕರೊಡನೆ ಉಭಯ ಕುಶಲೋಪರಿ ನಡೆಯಬಹುದು , ಯಾವುದೋ ವಿಚಾರವಾಗಿ ಲೋಕಾಭಿರಾಮವಾಗಿ ಚರ್ಚಿಸಲೂಬಹುದು , ಕೆಲವರ ಹಾವ-ಭಾವವೇ ನಮಗೆ ನಗೆ ತರಿಸಬಹುದು , ಇನ್ನೂ ಕೆಲವರ ರೀತಿ-ರಿವಾಜುಗಳು ನಮ್ಮಲ್ಲಿ ಆಶ್ಚರ್ಯ ಹುಟ್ಟಿಸಬಹುದು , ಮತ್ತೂ ಕೆಲವರ ಚರ್ಯೆ ನಮಗೆ ಅಸಹ್ಯಕರವಾಗಿರಬಹುದು . ಇಲ್ಲಿ ನಡೆಯುವ ಕೆಲವು ಘಟನೆಗಳು ನಮ್ಮ ಸ್ಮೃತಿ-ಪಟಲದಲ್ಲಿ ಉಳಿಯಬಹುದು , ಇನ್ನೂ ಕೆಲವು ಘಟನೆಗಳು ದೇವರು ನಮಗಿತ್ತ ವರವಾದ ಮರೆವಿನ ದೆಸೆಯಿಂದ ಕಣ್ಮರೆಯಾಗಲೂಬಹುದು . ಒಟ್ಟಿನಲ್ಲಿ , ಬಸ್ಸಿನ ಪ್ರಯಾಣ ತನ್ನದೇ ಆದ "ವಾವ್ ಫ್ಯಾಕ್ಟರ್ " ಅನ್ನು ಹೊಂದಿರುತ್ತದೆ . ಈ ಬಸ್ಸೆಂಬ "ಕಿರು ಬ್ರಹ್ಮಾಂಡ"ದಲ್ಲಿ ನಾನೂ ಸಾಕಷ್ಟು ಜನರೊಡನೆ ಸಂಭಾಷಣೆ ನಡೆಸಿರುತ್ತೇನೆ , ಕೆಲವು ಉಭಯ-ಕುಶಲೋಪರಿಗೆ ಸೀಮಿತವಾಗಿರಬಹುದು ; ಮತ್ತೂ ಕೆಲವು ಸುದೀರ್ಘ ಚರ್ಚೆಯಾಗಿ ಮಾರ್ಪಾಡಾಗಿರಬಹುದು . ಇಲ್ಲಿ ನಡೆದ ಕೆಲವು ವಿಚಿತ್ರ ಘಟನಾವಳಿಗಳಿಗೂ ನಾನು ಸಾಕ್ಷಿಯಾಗಿರುತ್ತೇನೆ .



ಅದರಂತೆ , ಮೊನ್ನೆ ನಾನು ಬಸ್ಸಿನಲ್ಲಿ ಕಾಲೇಜಿಗೆ ಹೋಗುವಾಗ , ನಾಯಂಡಹಳ್ಳಿಯಲ್ಲಿ ( ನಮ್ಮ ಮಹಾರಾಜನ ವರಪ್ರಸಾದದಿಂದಾಗಿ ) ಒಬ್ಬ 'ವಯಸ್ಕ ಕುಡುಕ'ನೊಡನೆ ಮಾತುಕತೆಯಾಯಿತು . ಆದರೆ , ಇದಕ್ಕೂ ಮುಂಚೆ , ಕೆಲವಾರು ಬಾರಿ , ಬಸ್ಸಿನಲ್ಲಿರುವ ಕುಡುಕರು ನನ್ನನ್ನು ಸಂಭಾಷಣೆಗೆ ಎಳೆದಿದ್ದಾರೆ . ಈ ಕುಡುಕರು , ಬಸ್ಸಿನಲ್ಲಿರುವ ಇತರರನ್ನು ಬಿಟ್ಟು ನನ್ನನ್ನೇ ಏಕೆ ಮಾತಿಗೆ ಎಳೆಯುತ್ತಾರೆ ? ಎಂಬ ಪ್ರಶ್ನೆಗೆ ಉತ್ತರ ದೊರೆಯದೇ ನಮ್ಮ ಹಲವಾರು ಮಿತ್ರರನ್ನು ಕೇಳಿದ್ದೇನೆ . ಅದಕ್ಕೆ ಹೆಚ್ಚಿನವರು ನನ್ನ ಗಡ್ಡದ ಕಡೆಗೆ ಕೈ ತೋರಿಸಿದ್ದಾರೆ . ಅದು ನಿಜವಿರಲೂಬಹುದೆಂದು ಕೆಲವೊಮ್ಮೆ ನನಗನಿಸಿದೆ . ಏಕೆಂದರೆ , ನಾನು ಗಡ್ಡ ಬಿಟ್ಟಾಗ, ಶ್ರೀ ಶರತ್ ಚಂದ್ರ ಚಟ್ಟೋಪಾಧ್ಯಾಯರವರ "ದೇವದಾಸ್" ಕಾದಂಬರಿಯಲ್ಲಿ ಬರುವ ; ಪಾರೋ ಸಿಗದೇ , ದಿಗ್ಬ್ರಾಂತನಾಗಿ , ಎಲ್ಲವನ್ನೂ ಪರಿತ್ಯಜಿಸಿ, ಕುಡಿತಕ್ಕೆ ಶರಣಾದ "ದೇವದಾಸ್" ನ ಮುಖ-ಲಕ್ಷಣಗಳು ನನ್ನಲ್ಲಿ ಎದ್ದು ಕಾಣುತ್ತದಂತೆ . ಮಿಗಿಲಾಗಿ , ಕುಡುಕರನೇಕರು 'ದೇವದಾಸ್'ನನ್ನೇ ತಮ್ಮ ದಳಪತಿಯೆಂದೋ ಅಥವಾ ತಮ್ಮ ಪ್ರತಿನಿಧಿಯೆಂದೋ ಭಾವಿಸಿರಬಹುದು .ಹಾಗಾಗಿ , ನನ್ನ ಮತ್ತು ಆ "ದೇವದಾಸ್"ನ ನಡುವೇ ಯಾವುದೇ ಸಾಮ್ಯ ಗುಣಗಳು ಇಲ್ಲದಿದ್ದರೂ, ಕೇವಲ ನನ್ನ "ಗಡ್ಡ"ದ ವರಪ್ರಸಾದದಿಂದಾಗಿ - ಹೀಗೆ ಕೆಲವಾರು ಬಾರಿ ನನ್ನ ಮತ್ತು ಕುಡುಕರ ನಡುವೆ ಕುಶಲೋಪರಿ-ಸಾಂಪ್ರತಗಳು ನಡೆಯುತ್ತದೆಂದು ಮಿತ್ರರನೇಕರ ಅಭಿಪ್ರಾಯವಾಗಿದೆ . ಅದು ಹೇಗೂ ಇರಲಿ ! 



ನನಗೆ ಗಾಂಧೀಯವರ - " ಕುಡಿತ ದೇಹವನ್ನೇ ನಾಶ ಮಾಡುತ್ತದೆ " ಎಂಬ ಘೋಷ-ವಾಕ್ಯದಲ್ಲಿ ನಂಬಿಕೆಯಿದ್ದರೂ , ಕುಡುಕರ ಮೇಲೆ ಕರುಣೆ ,ಅನುಕಂಪ ಬರಲು ಕಾರಣ ಶ್ರೀ.ಜಿ.ಪಿ.ರಾಜರತ್ನಂರವರ "ರತ್ನನ ಪದಗಳು" ಎಂಬ ಕೃತಿಯಲ್ಲಿ ಬರುವ 


"
ಯೇಳ್ಕೊಳ್ಳಾಕ್ ಒಂದ್ ಊರು
ತಲೇಮೇಗ್ ಒಂದ್ ಸೂರು
ಮಲಗಾಕೆ ಬೂಮ್ತಾಯಿ ಮಂಚ;
ಕೈ ಯಿಡದೋಳ್ ಪುಟ್ನಂಜಿ
ನೆಗನೆಗತ ಉಪ್ಗಂಜಿ
ಕೊಟ್ರಾಯ್ತು ರತ್ನನ್ ಪರ್ಪಂಚ!
"

- ಇವೇ ಮೊದಲಾದ ಪದ್ಯಗಳು . ರತ್ನನ ಪದಗಳಲ್ಲಿ ಅವರ ಜೀವನ ದರ್ಶನವಿದೆ. 'ಕುಡುಕ'ನೆಂಬ ಹೀಯಾಳಿಕೆಗೆ ಗುರಿಯಾದ ಬಡವನೊಬ್ಬನ ಕಾಣ್ಕೆ, ನೋವು, ನಲಿವು, ಒಲವು, ಗೆಲವು, ಸೋಲು ಎಲ್ಲವನ್ನೂ ಸ್ಪಷ್ಟವಾಗಿ ಚಿತ್ರಿಸಿದ್ದಾರೆ.


[


ಇತ್ತೀಚೆಗೆ , ನಮ್ಮ ಅಕ್ಕನವರ ಪುಟಾಣಿ ಮಗಳ ಬಾಯಿಂದ " ರೊಟ್ಟಿ ಅಂಗಡಿ ಕಿಟ್ಟಪ್ಪ .... ನನಗೊಂದು ರೊಟ್ಟಿ ತಟಪ್ಪ " ಹಾಡನ್ನು ಕೇಳಿದಾಗ ಅತೀವ ಆನಂದವಾಯಿತು .ಈಗಿನ "ಇಂಟರ್ನೆಟ್ ಜೆನೆರೇಶನ್ " ನವರ ಬಾಯಿನಲ್ಲೂ, ನಮ್ಮ ಕನ್ನಡದ ಶ್ರೀ.ಜಿ.ಪಿ .ರಾಜರತ್ನಂ ಅವರ "ಶಿಶು ಗೀತೆಗಳು" ಬರುತ್ತಿವೆಯಲ್ಲ ಎಂದು ಖುಷಿಯಾಯಿತು .ನಾನೂ ಚಿಕ್ಕಂದಿನಲ್ಲಿ ಹಾಡುತ್ತಿದ "ಬಣ್ಣದ ತಗಡಿನ ತುತ್ತೂರಿ, ಕಾಸಿಗೆ ಕೊಂಡನು ಕಸ್ತೂರಿ" ಎಂಬ ಮತ್ತೊಂದು ಪದ್ಯವೂ ನೆನಪಾಯಿತು. ಹಾಗೆಯೇ , ವಾಚಕರು ಜಿ.ಪಿ .ರಾಜರತ್ನಂ ರವರ ಬಗ್ಗೆ ನೆನಪಿಡಬೇಕಾದ ಮತ್ತೊಂದು ಅಂಶವೆಂದರೆ - ಅವರು ತಮಿಳು ಭಾಷೆಯಲ್ಲೂ ಒಳ್ಳೆಯ ಹಿಡಿತವನ್ನು ಸಾಧಿಸಿದ್ದರು . ತಮಿಳಿನ ಭಕ್ತಿ ಸಾಹಿತ್ಯದಲ್ಲಿ ಬರುವ ಆಳ್ವಾರುಗಳಲ್ಲಿ ಪ್ರಮುಖಳಾದ 'ಆಂಡಾಳ್' ಎಂದು ಪ್ರಸಿದ್ಧಿ ಪಡೆದಿರುವ ಶ್ರೀ ಗೊದಾದೇವಿಯು ಕರುಣಿಸಿರುವ 'ತಿರುಪ್ಪಾವೈ', ಪೆರಿಯಾಳ್ವಾರ್ ರವರ 'ತಿರುಪಲ್ಲಾಂಡು' - ಇವೇ ಮೊದಲಾದ ತಮಿಳು ಗ್ರಂಥಗಳನ್ನು ಕನಡಕ್ಕೆ ಸೊಗಸಾಗಿ ತರ್ಜುಮೆ ಮಾಡಿದ್ದಾರೆ . 


]



ನಾನು ಗಮನಿಸಿರುವ ಹಾಗೇ , ಈ ಕುಡುಕರ ಮಾತು ಒರಟಾಗಿದ್ದರೂ , ಅದರಲ್ಲಿ ಒಂದು ನೋವೂ ,ಒಂದು ಒಳ-ಆಶಯವೂ ಅಡಗಿರುತ್ತದೆ . ಮೊನ್ನೆ ನಾನು ಕಾಲೇಜಿಗೆ ಹೋಗುವಾಗ ನಮ್ಮ " ನಾಯಂಡಹಳ್ಳಿ ಮಹಾರಾಜನ" ಆಶೀರ್ವಾದದಿಂದಾಗಿ , ಒಬ್ಬ ವಯಸ್ಕ ಕುಡುಕನೊಡನೆ ಬಸ್ಸಿನಲ್ಲಿ ಮಾತುಕತೆಯಾಯಿತು ಎಂದು ತಿಳಿಸಿದೆನಷ್ಟೇ . ಈ ಕುಡುಕ ನಾನು ಹತ್ತಿದ ಬಸ್ಸಿಗೆ , ಮುಂಚಿನ ಯಾವುದೋ ಸ್ಟಾಪಿನಲ್ಲಿ ಹತ್ತಿರಬೇಕು . ತನ್ನ ವಿಚಿತ್ರ ಮಾತಿನ ಶೈಲಿಯಿಂದಾಗಿಯೂ , ತನ್ನ ಏರು ಧ್ವನಿಯ ಕೂಗಾಟಗಳಿಂದಲೂ ಬಸ್ಸಿನಲ್ಲಿ ಆ ಭೂಪ ಆಗಲೇ "ನೋಟೆಡ್" ಆಗಿದ್ದ.



ನಮ್ಮ ಕಂಡೆಕ್ಟರ್ - ಡ್ರೈವರುಗಳು , ಬಿ.ಎಂ.ಟಿ.ಸಿ ಬಸ್ಸುಗಳನ್ನು ಕೇವಲ ಮಾನವ ನಿರ್ಮಿತ ಯಂತ್ರವೆಂದೂ , ಅವುಗಳಿಗೆ ತನ್ನದೇ ಆದ ಮಿತಿಗಳು ಇರುತ್ತವೆಂದೂ ಭಾವಿಸುವುದಿಲ್ಲ . ಬದಲಿಗೆ ಅವರು ವಿಶಾಲ ಹೃದಯಿಗಳು ; ಈ ಬಸ್ಸುಗಳನ್ನು ಅವರು ಯಾವುದೋ "ದೈವ ನಿರ್ಮಿತ ಬಲೂನಿಗೆ" ಸಮನಾದ ವಸ್ತುವೆಂದು ತಿಳಿದಿರುತ್ತಾರೆ . ಮತ್ತೂ ಆ ಬಲೂನು ಒಡೆದು ಹೋಗುವುದಿಲ್ಲವೆಂದೂ ಭಾವಿಸಿರುತ್ತಾರೆ . ಹಾಗಾಗಿ , ಬಲೂನಿನೊಳಗೆ ಗಾಳಿಯನ್ನು ಹೆಚ್ಚೆಚ್ಚು ಊದಿ ಸೇರಿಸುವ ಹಾಗೇ , ಅವರ ಮನಸ್ಸಿಗೆ ಸಾಕು ಎನಿಸುವವರೆಗೂ ಜನರನ್ನು ಬಸ್ಸಿನೊಳಗೆ ಸೇರಿಸುತ್ತಾ ಹೋಗುತ್ತಾರೆ . ಆದುದ್ದರಿಂದ , ನಾವು ಬಸ್ಸಿನೊಳಗೆ ಜನ-ಸ್ತೋಮವನ್ನೇ ಕಾಣಲು , "ನಿಲ್ಲಲು ಜಾಗವೇ ಇಲ್ವಲ್ಲಾ ಸ್ವಾಮೀ " , "ಎನ್ರೀ ಕಾಲು ತುಳಿತ್ತಿದ್ದೀರಲ್ಲಾ ... ಕಣ್ಣು ಕಾಣಲ್ವೇ ? " ಎಂಬ ಪ್ರಯಾಣಿಕರ ಕೂಗಿಗೂ - ನಮ್ಮ ಕಂಡೆಕ್ಟರ್ - ಡ್ರೈವರುಗಳ ಈ ಭ್ರಮೆಯೇ ಕಾರಣವೆಂದು ನನಗನಿಸಿದೆ



ಮೊನ್ನೆ ನಾನು ಹತ್ತಿದ ಬಸ್ಸು ಕೂಡ ಜನ-ಜಂಗುಳಿಗಳಿಂದ ಕೂಡಿತ್ತು . ನಿಲ್ಲಲ್ಲು ಹಿಂದೆ ಎಲ್ಲೋ ಸ್ವಲ್ಪ ಜಾಗವಿದ್ದಂತೆ ಕಂಡಿತು . ನಾನೂ , ನನ್ನ ಮಿತ್ರರಾದ - ಶ್ರೀ ಪ್ರಶಾಂತ್ ರವರು ಮತ್ತು ಶ್ರೀ ನಿಂಗ್ರಾಜ್ ರವರು ಅಲ್ಲಿ ಹಬ್ಬಿದ್ದ ಜನಸ್ತೋಮವನ್ನು ಕಷ್ಟ ಪಟ್ಟು ದಾಟಿ ಅಲ್ಲಿ ಹೋಗಿ ನಿಂತೆವು . ನಮ್ಮ ಅದೃಷ್ಟವೋ-ದುರದೃಷ್ಟವೋ ; ನಾವು ನಿಂತ ಜಾಗದ ಪಕ್ಕದಲ್ಲೇ , ಕಿಟಕಿ ಸೀಟಿನ ಬಳಿ , ನಮ್ಮ ಕಥಾನಾಯಕ ಕೂತಿದ್ದರು . ಅವರ ಚಲನ-ವಲನಗಳಿಂದಲೇ ಅವರು ಕುಡಿದಿದ್ದರು ಎಂಬುದಾಗಿ ನಾವು ಖಚಿತಪಡಿಸಿಕೊಂಡೆವು . ಆಶ್ಚರ್ಯವೆಂದರೆ ಅವರ ಕಣ್ಣು ಒದ್ದೆಯಾಗಿತ್ತು . ಬಹುಷಃ ಕುಡುಕನ ಕಣ್ಣೀರಿರಬೇಕೆಂದು ನಾನು ಸುಮ್ಮನಾದೆ . ಆತ ನಾನು ಬಂದದನ್ನು ಕಂಡು , ತಮ್ಮ ನೆಚ್ಚಿನ ಪ್ರತಿನಿಧಿಯಾದ "ದೇವದಾಸ್" ಗಡ್ದವು ನನ್ನಲ್ಲಿ ಬೆಳೆದಿರುವುದನ್ನು ನೋಡಿ , ತಮ್ಮ ದುಃಖದ ಉದ್ರೇಕವನ್ನು ಕಡಿಮೆ ಮಾಡಿಕೊಂಡು , ತಮ್ಮ ಅಮೂಲ್ಯವಾದ ಕಣ್ಣೀರು ಎಲ್ಲಿ ನೆಲಕ್ಕೆ ಬಿದ್ದು ಹಾಳಾಗುತ್ತದೋ ಎಂಬ ಭೀತಿಯಿಂದಲೋ ಏನೋ , ಗಾಬರಿಯಿಂದ ತಮ್ಮ ಕಣ್ಣೀರನ್ನು ಒರೆಸಿಕೊಳ್ಳುತ್ತಾ , ಸ್ವಲ್ಪ ಸಮಾಧಾನದಿಂದ , ನನ್ನನ್ನು ಉದ್ದೇಶಿಸಿ :



" ಅಣ್ಣಾ ... ನಿನ್ನೇ ಮಾರ್ಕೆಟ್ ತಾವ ನನ್ನ ತಮ್ಮನ್ ನೋಡ್ದೆ ಕಣ್ಣಣ್ಣ ... ಕಾಲು ಇಟ್ಕಂಡೆ ... ಅಣ್ಣ ಕಾಲು ಇಟ್ಕಂಡೇ ಕೇಳ್ದೆ , ' ಲೋ ಬಡ್ಡಿ ಹೈದ್ನೇ , ಊರಿಗ್ ಬಾರ್ಲ ... ಅವ್ವ ಕಾಯ್ತಾವ್ಳೆ ... ನಿನ್ ಮೂತಿ ನೋಡಿ ಅವ್ಳು ಒಂದು ತಿನ್ಗ್ಳು ಆಯಿತ್ಲ '. ಕಾಲು ಇಟ್ಕೊಂಡ್ರು .... ಅವನು ಬರಾಕಿಲ್ಲ ಅಂದ್ಬಿಟ ಅಣ್ಣ ... ಬೋ.ಮಗ ... ಸೂ.ಮಗ "




ಅಯ್ಯೋ ದೇವರೇ ! ನನಗೆ ಏಕೆ ಇಂತಹ ಸ್ಪೆಸಿಮೆನ್ಗಳು ಗಂಟು ಬೀಳುತ್ತಾರೋ ? ಮಹಾಭಾರತದಲ್ಲಿ ಕರ್ಣ ಭೀಷ್ಮರನ್ನು ಚೇಡಿಸಿದಾಗ , ಭೀಷ್ಮರು ಕರ್ಣನಿಗೆ ಹೇಳಿದ " ನಿನ್ನ ಮಾತು ನಿನ್ನ ಕುಲವನ್ನು ಸೂಚಿಸುತ್ತದೆ " ಎಂಬ ಉಪದೇಶವನ್ನು ಒಂದುವೇಳೆ ನಾನು ಆ ಕುಡುಕಪ್ಪನಿಗೆ ಕೊಟ್ಟರೆ , ಖಂಡಿತ ಆತ ನಾಲ್ಕು ಬಾರಿಸುತ್ತಾನೆ ಎಂಬುದಾಗಿ ನನ್ನ ಒಳ ಮನಸ್ಸು ಎಚ್ಚರಿಸಿತು . ಮತ್ತೂ ಆತನ ವೇಷ-ಭೂಷಣ , ಮಾತಿನ ಶೈಲಿ ನಮ್ಮ ಮಂಡ್ಯದವರ ತರಹ ಕಂಡಿತು . ಹಾಗಾಗಿ ನಾನು ಸ್ವಲ್ಪ ಧೈರ್ಯ ತಂದುಕೊಂಡು " ನೀವು ಮಂಡ್ಯದವರಾ ? " ಎಂದು ಕೇಳಿಯೇಬಿಟ್ಟೆ ! ಆತ " ಹೌದಣ್ಣ . ಮಂಡ್ಯದವರು . ಮೇಲುಕೋಟೆ ಕೇಳಿರ್ಬೇಕಲ್ವಾ ? ಅದ್ರ ತಾವ ಒಂದು ಹಳ್ಳಿ " ಅಂದುಬಿಟ್ಟ . ನಮ್ಮಂತಹ ನಾಮದ ಐಯ್ಯಂಗಾರಿಗಳಿಗೆ ಮೇಲುಕೋಟೆ ಅಥವಾ ತಿರುನಾರಯಣಪುರ ಎಂಬ ಹೆಸರು ಕೇಳಿದರೇ ಸಾಕು , ಏನೋ ಒಂದು ತರಹದ ಉತ್ಸಾಹ . ನಾನು ಅದೇ ಉತ್ಸಾಹದಿಂದಲೇ ಹೇಳಿದೆ " ಓ , ಮೇಲುಕೋಟೆನಾ ... ಅಲ್ಲಿಗೆ ಬಹಳ ಸಲ ಬಂದಿದ್ದೀನಿ " . ಆತ ತನ್ನ ಕಥೆಯಲ್ಲಿ ನಾನು ಉತ್ಸುಕನಾಗಿದ್ದೇನೆ ಎಂದು ಭಾವಿಸಿ , ಪುನಃ ತನ್ನ ಪೂರ್ತಾ ಕಥೆಯನ್ನು ನನಗೆ ಹೇಳಲು ಶುರು ಮಾಡಿದ .ಸಂಕ್ಷಿಪ್ತವಾಗಿ ಹೇಳಿ ಮುಗಿಸುವುದಾದರೆ :




ಆತ ಒಬ್ಬ ರೈತ . ಹಳ್ಳಿಯಲ್ಲಿರುವ ಕೆಲವು ಕುತಂತ್ರಿಗಳು ತನ್ನ ತಮ್ಮನಿಗೆ ತಲೆ ಕೆಡಿಸಿ , ಬೆಂಗಳೂರಿನಲ್ಲಿ ಹೆಚ್ಚು ದುಡಿಯಬಹುದೆಂದು ಆಸೆ ತೋರಿಸಿ , ಇಲ್ಲಿ ಸರ್ವರೂ ಐಶಾರಾಮಿ ಜೀವನವನ್ನು ನಡೆಸುತ್ತಿದ್ದಾರೆಂದು ಹೇಳಿ ತನ್ನ ತಮ್ಮನ ದಿಕ್ಕು ತಪ್ಪಿಸಿ , ಬೆಂಗಳೂರಿಗೆ ಕಳುಹಿಸಿದ್ದಾರೆ . ಅವನ ತಮ್ಮ ಊರು ಬಿಟ್ಟು , ಬೆಂಗಳೂರಿಗೆ ಬಂದು ಸುಮಾರು ಒಂದು ತಿಂಗಳೇ ಆಯಿತಂತೆ . ಆದರೂ , ಮನೆಗೆ ಒಂದು ಫೋನ್ ಮಾಡಿಯಾಗಲಿ ತನ್ನ ಯೋಗ-ಕ್ಷೇಮದ ಸಮಾಚಾರವನ್ನು ತಿಳಿಸಿಲ್ಲ . ನಮ್ಮ ಕುಡುಕಪ್ಪನ ತಾಯಿಗೆ ಆತಂಕ ಹೆಚ್ಚಾಗಿ , " ನೀನ್ ಒಬ್ಬನೇ ಊರ್ನಾಗೆ ಉಂಡರೆ ಸಾಕಾ ? ನಿನ್ನ್ ತಮ್ಮ ಬೆಂಗ್ಳೂರ್ನಾಗೆ ಹೆಂಗವ್ನೆ ಅಂತ ನಿಂಗ್ ಯೋಚನೆ ಇಲ್ವಾ ? " ಎಂದೆಲ್ಲಾ ಹೇಳಿದರಂತೆ . ಮಿಗಿಲಾಗಿ ಕುಡುಕಪ್ಪನ ತಾಯಿ "ಹಾರ್ಟ್ ಪೇಷಂಟ್ " ಆಗಿರುವುದರಿಂದ , ತಾಯಿಯ ಆರೋಗ್ಯದಕಡೆಗೆ ಹೆಚ್ಚು ಒಲವಿರುವ ನಮ್ಮ ಕುಡುಕಪ್ಪ - ತಾಯಿಯ ಅಣತಿಯ ಮೇರೆಗೆ ಬೆಂಗಳೂರಿಗೆ ಬಂದು ತನ್ನ ತಮ್ಮನನ್ನು ಹುಡುಕಲು ನಿರ್ಧರಿಸಿದನಂತೆ . ಆತನಿಗೆ ಬೆಂಗಳೂರಿನಲ್ಲಿ ಮಿಶ್ರ ಫಲ ಸಿಕ್ಕಿದೆ ; ಒಂದು ಕಡೆ ಮಾರುಕಟ್ಟೆಯಲ್ಲಿ , ಆತ ಹೊತ್ತು ತಂದ , ತನ್ನ ಜಮೀನಿನಲ್ಲೇ ಬೆಳೆದ ದಷ್ಟ -ಪುಷ್ಟ ಟೊಮೇಟೊಗಳು ಒಳ್ಳೆ ಬೆಲೆಗೆ ಮಾರಟವಾದದ್ದು ಶುಭ-ಸಮಾಚಾರವಾದರೆ ; ಆತನ ತಮ್ಮ , ಹಳ್ಳಿಗೆ ಹಿಂತಿರುಗಿ ಬರಲು ಒಪ್ಪದೇ ಇರುವುದು ದುಃಖದ ಸಂಗತಿ . ಆದುದ್ದರಿಂದ ನಮ್ಮ ಕುಡುಕಪ್ಪ ತನ್ನ ತಮ್ಮನ ಮೇಲೆ ಕುಪಿತನಾಗಿದ್ದಾನೆ . 


ಆತ ಕಥೆಯನ್ನು ತನ್ನದೇ ಶೈಲಿಯಲ್ಲಿ ವಿವರಿಸುತ್ತಾ , ಮಧ್ಯೆ-ಮಧ್ಯೆ ಕಣ್ಣು ಒರೆಸಿಕೊಳ್ಳುತ್ತಾ , ತಾನು ಟೊಮೇಟೊಗಳನ್ನು ಮಾರಿ ಬಂದ ದುಡ್ಡನ್ನು , ಜೋಬಿನಿಂದ ತೆಗೆದು ನಮಗೆಲ್ಲಾ ಜರ್ಬಿನಿಂದ ತೋರಿಸುತ್ತಾ ; ಆಗಾಗ ಕಥೆ ಹೇಳುವ ಶಾಸ್ತ್ರವನ್ನು ಕೊಂಚ ಹೊತ್ತು ನಿಲ್ಲಿಸಿ ಪುನಃ ಪ್ರಾರಂಭಿಸುತ್ತಿದ್ದ . ಆದರೆ , ಕಥೆ ಹೇಳುವಾಗ ಅನವಶ್ಯಕವಾಗಿ ಮಧ್ಯೆ ನಿಲ್ಲಿಸಿ , ಪುನಃ ಪ್ರಾರಂಭಿಸುವ ವಿಧಾನವನ್ನು ಯಾವ ಭಾಷೆಯ ವ್ಯಾಕರಣ ಶಾಶ್ತ್ರ ಒಪ್ಪುತದೆ ? - ಎಂದೆಲ್ಲಾ ನಾನು ಸಂಶೋಧನೆ ಮಾಡಲು ಹೋಗಲ್ಲಿಲ್ಲ ! ಆತ ಮಾತುಕತೆಯ ಮಧ್ಯೆ ಕೊಂಚ ವಿಶ್ರಾಮ ತೆಗೆದುಕೊಂಡಾಗ , ನಾನೂ " ಓ .. ಹಾಗಾ " , " ಅಳಬೇಡಿ ... ದೇವರು ಒಳ್ಳೇದು ಮಾಡ್ತಾನೆ " , " ಯೋಚನೆ ಮಾಡ್ಬೇಡಿ ... ಒಳ್ಳೇದು ಆಗುತ್ತೆ " ಎಂದೆಲ್ಲಾ ಧ್ವನಿ ಸೇರಿಸುತ್ತಿದೆ .



ಒಟ್ಟಿನಲ್ಲಿ , ಆತನ ಮಾತಿನ ಶೈಲಿ , ನನಗೂ ಮತ್ತೂ ನನ್ನ ಮಿತ್ರ ನಿಂಗರಾಜ್ ರವರಿಗೆ ಕೆಲವೊಮ್ಮೆ ಹಾಸ್ಯಾತ್ಮಕವಾಗಿ ಕಂಡರೂ , ಮತ್ತೊಮ್ಮೆ "ಬಾಳಿನ ಮರ್ಮ ತಿಳಿದವರ್ಯಾರು" ಎಂಬ ಉಕ್ತಿಯನ್ನು ನೆನಪಿಸಿ ನಮನ್ನು ವಿಚಾರಶೀಲರನ್ನಾಗಿ ಮಾಡುತ್ತಿತ್ತು . ಆದರೆ ನನ್ನ ಮತ್ತೊಬ್ಬ ಮಿತ್ರ ಪ್ರಶಾಂತ್ ಕುಡುಕಪ್ಪನ ಮಾತನ್ನು ಕೇಳಿ ಕಳವಳಗೊಂಡಿದ್ದರು ! ಅದಕ್ಕೆ ಕಾರಣ ಇಲ್ಲದೇ ಇಲ್ಲ . ನಮ್ಮ "ಕುಡುಕಪ್ಪ ಮಹಾಶಯ" ; ಆತನ ಕರುಣಾಜನಕ ಕಥೆಯನ್ನು ವಿವರಿಸುತ್ತಿರುವಾಗ , ಒಮ್ಮೆ ನಮ್ಮ ಪ್ರಶಾಂತ್ ರವರ ಕಡೆಗೆ ಕೈ ತೋರಿಸಿ 





" ನಮ್ಮ ತಮ್ಮ್ ನೂ ಹಿಂಗೆ ಇದ್ದ ಅಣ್ಣ ; ಸಂಣ್ ವಯಸ್ನಲ್ಲಿ . ನಾವು ಸಣ್ಣವರಿದ್ದಾಗ , ಜಮೀನಾಗೆ ನಾನು ಕೆಲಸ ಮಾಡ್ತಿದ್ದರೂ , ನಮ್ಮವ್ವ ಅವನಿಗೆ ಮಾತ್ರ ಬೆಣ್ಣೆ ಕೊಡ್ತಿದ್ದಳು . ಹಳ್ಳಿಯಾಗಿರ್ಬೇಕಾದರೇ ಎಷ್ಟು ಗುಂಡು-ಗುಂಡು ಆಗಿ .... ಅದೋ ಅವನ ತರಾನೆ ( ಪ್ರಶಾಂತ್ ತರಹ ) ಇದ್ದ . ಈಗ ಈ ಹಾಳು ಬೆಂಗಳೂರು ಪ್ಯಾಟೆ ಗೆ ಬಂದು ಜೀತ ಮಾಡಿಕೊಂಡು ಸೊರ್ಗೋಬಿಟ್ಟವ್ನೆ . ಆ ಹೈದ ನಿನ್ನೆ ರಾತ್ರಿ ಇಟೇ-ಇಟು ಚಿತ್ರಾನ್ನಕ್ಕೆ ೧೮ ರುಪಾಯಿ ಕೊಟ್ಟು ತಿಂದ . ನಮ್ಮ ಊರ್ರ್ನಾಗೆ ನಾವು ಲಾಟ್-ಲಾಟ್ ಆಗಿ ತಿನ್ತೀವಣ್ಣ ..... " - ತನ್ನ ಕಡೆಗೆ ಕೈ ಮಾಡಿ , ಮೇಲಾಗಿ ತನ್ನನ್ನೇ ಉದಾಹರಿಸಿ ಹೇಳುತಿದ್ದ ಕುಡುಕಪ್ಪನ ಈ ಮಾತುಗಳು , ಎಲ್ಲಿ " ನೀನೆ ನನ್ನ ತಮ್ಮ , ಊರಿಗೆ ಬಾ " ಎಂದು ಹೇಳಿಬಿಟ್ಟರೆ ಎಂಬ ಆತಂಕ - ಇವೆಲ್ಲಾ ನಮ್ಮ ಪ್ರಶಾಂತ ಕಳವಳಗೊಳ್ಳುವುದಕ್ಕೆ ಕಾರಣವಾಗಿತ್ತು .





ಹೀಗೆ , ತನ್ನ ಕಥೆಯಿಂದಲೂ , ಕಥೆ ಹೇಳುವ ಶೈಲಿಯಿಂದಲೂ , ಕುಡುಕಪ್ಪ ಬಸ್ಸಿನಲ್ಲಿದ್ದ ಪ್ರಯಾಣಿಕರನ್ನು ಮನರಂಜಿಸುತ್ತಿರುವಾಗಲೇ - ನಮ್ಮ "ನಾಯಂಡಹಳ್ಳಿ ಮಹಾರಾಜನಿಗೆ" ಕಡೇಗೂ ಕರುಣೆ ಬಂತೆಂದು ಕಾಣಿಸುತ್ತದೆ , ಸಿಗ್ನಲ್ ಬಿಟ್ಟಿತು . ಆದರೆ ನಾವು ಇಳಿಯಬೇಕಿದ್ದ ಕಾಲೇಜಿನ "ಬಸ್ ಸ್ಟಾಪ್" ಇನ್ನೂ ಕೊಂಚ ದೂರದಲ್ಲಿತ್ತು . ತಾನು ಅನುಸರಿಸುತ್ತಿದ್ದ ಅಲಿಖಿತ ವಾಡಿಕೆಯಂತೆ ಕೊಂಚ ಸಮಯ ವಿರಮಿಸಿ, ಪೂರ್ವೊತ್ಸಾಹವನ್ನು ಪಡೆದು , ಸ್ವಲ್ಪ ಗದ್ಗದಿತ ಕಂಠದಿಂದಲೇ ಮತ್ತೊಮ್ಮೆ ನನ್ನನ್ನುದ್ದೇಶಿಸಿ :




" ಅಣ್ಣಾ ... ಬೆಂಗಳೂರ್ನಾಗೆ ಏನೈತೆ ಮಣ್ಣು ! ನಿಮ್ಮ ತರಾನೆ 'ಕನ್ನಡ'ಕ ಹಾಕಿಕೊಂಡು ( ಆತ ಇಲ್ಲಿ ಯಾವುದೇ ಪನ್ ಉದ್ದೇಶಿಸಿರಲ್ಲಿಲ್ಲ ) , ಬ್ಯಾಗ್ ನೇತಾಕೊಂಡು , ಯಾವ್ದೋ ಕಂಪನಿ-ಗಿಂಪನಿ ನಲ್ಲಿ ಜೀತ ಮಾಡಿಕೊಂಡು .... ಥು ! ನೆಮ್ಮದಿನೇ ಇಲ್ಲ್ವಲ್ಲಣ್ಣ . ನಮ್ಮ ಹಳ್ಳಿಗ ಒಂದ್ ಕಿತ ಬನ್ನಿ ( ಆತ ಕುಡುಕನೇ ಇರಬಹುದು . ಆತನಿಗೆ ತನ್ನ ಮಾತಿನ ಮೇಲೆ ಹತೋಟಿ ಇಲ್ಲದಿರಬಹುದು . ಆದರೂ , ಸರ್ವರನ್ನೂ ಸ್ವಾಗತಿಸುವ ನಮ್ಮ ಕನ್ನಡದವರ ಹೃದಯ ವೈಶಾಲ್ಯತೆಯನ್ನು ಆತ ಮರೆತಿರಲ್ಲಿಲ್ಲ ) . ನಾವು ರೈತರೇ ಇರಹಬಹುದು . ಆದ್ರೆ , ನಾವು ರಾಜರ ತರ ನೆಮ್ಮದಿಯಿಂದ , ನಾವು ಎಷ್ಟು ದುಡೀತೀವೋ ಅಷ್ಟರಲ್ಲಿ ಸಂತೃಪ್ತಿಯಿಂದ ಬದುಕ್ತೀವಿ . ಇಲ್ಲಿನ ಜನರಲ್ಲಿ ದುರಾಸೆ ಹೆಚ್ಚಾಗಿದೆ . ಬೇಕು-ಬೇಕು ಗಳಲ್ಲೇ ಜೀವನ ಮುಗಿಸಿಬಿಡ್ತಿರಲ್ಲಣ್ಣ . ಹೀಗೆ ಮುಂದುವರಿದರೆ , ನನ್ನ ಶಾಪ ಅಂತಾನೇ ತಿಳ್ಕಳಿ , ಬೆಂಗಳೂರ್ ಹಾಳಾಗಿ ಹೋಗುತ್ತೆ .... ಹಾಳಾಗಿ ಹೋಗುತ್ತೆ ಅಣ್ಣಾ ..... " ಎಂದ . " ಬೆಂಗಳೂರಿನ ಐಶಾರಾಮ್ಯತೆಗೆ" ಗಂಟು ಬಿದ್ದು , ಹಳ್ಳಿ ಬಿಟ್ಟು , ಬೆಂಗಳೂರಿಗೆ ಸೇರಿರುವ ತನ್ನ ತಮ್ಮನ ನೆನಪಾಗಿ ಪುನಃ ಅಳಲು ಶುರು ಮಾಡಿದ . ತನ್ನನು ತಾನೇ ಸಮಾಧಾನವೂ ಪಡಿಸಿಕೊಳ್ಳುತ್ತಿದ್ದ . 



ಆಗ ನನ್ನ ಯೋಚನಾ ಲಹರಿ ಈ "ಶಾಪ" ಎಂಬ ಪದ ಕೇಳಿ ; ಅದರ ಕಡೆ ಹೊರಟಿತು . ಈ ಶಾಪ-ಅದರ ವಿಮೋಚನೆ ಎಂಬುದನೆಲ್ಲಾ ಪುರಾಣಗಳಲ್ಲಿ ಕೇಳಿ-ಓದಿ-ತಿಳಿದುಕೊಂಡಿರುವಂತದ್ದು . ತತ್ ಕ್ಷಣ ಅದೇಕೋ ಏನೋ ನಮ್ಮಜ್ಜಿಯವರು ಒಮ್ಮೆ ನನಗೆ ಹೇಳಿದ್ದ , ಅಲುಮೇಲಮ್ಮ ಮೈಸೂರು ಮಹಾರಾಜರಿಗೆ ಇತ್ತ ಶಾಪ ಎಂದು ಕರೆಯುವ "ತಲಕಾಡು ಮರಳಾಗಿ , ಮಾಲಂಗಿ ಮಡುವಾಗಿ , ಮೈಸೂರು ರಾಜರಿಗೆ ಮಕ್ಕಳಾಗದೆ ಹೋಗಲಿ " ಎಂಬುದು ನೆನಪಾಯಿತು. ಈಗಲೂ ದಸರಾ ಉತ್ಸವದ ಸಂದರ್ಭದಲ್ಲಿ ಅಲುಮೇಲಮ್ಮನ ಪೂಜೆ ತಪ್ಪದೆ ನಡೆಯುತ್ತದೆ ಎಂಬ ವಿಚಾರವೂ ಹೊಳೆಯಿತು . ಹಾಗಿದ್ದರೇ , ನಮ್ಮ ಕುಡುಕಪ್ಪನ ಶಾಪವೂ ಫಲಿಸಿಬಿಟ್ಟರೆ ಗತಿಯೇನು ? - ಎಂದೆಲ್ಲಾ  ನಾನು ಯೋಚಿಸುತ್ತಿರುವಾಗಲೇ ಬಸ್ಸು ನಮ್ಮ ಕಾಲೇಜಿನ ಸ್ಟಾಪನ್ನು ಸಮೀಪಿಸುತ್ತಿರುವುದು ಕಂಡಿತು . ಇಷ್ಟು ಹೊತ್ತು ನನ್ನನ್ನು ತಮ್ಮ ಸಂಭಾಷಣೆಯ ಒಂದು ಭಾಗವನ್ನಾಗಿಸಿಕೊಂಡಿದ್ದ ಆ ಭೂಪನಿಗೆ ತಿಳಿಸದೇ ,ಬಸ್ಸಿನಿಂದ ಇಳಿದು ಹೋದರೆ ಸೌಜನ್ಯವಲ್ಲವಂದು ತಿಳಿದು , ಕುಡುಕಪ್ಪನಿಗೆ " ಯೋಚನೆ ಮಾಡ್ಬೇಡಿ ... ಎಲ್ಲ ಒಳ್ಳೆದಾಗುತ್ತೆ . ನಮಸ್ತೆ ! " ಎಂದು ಹೇಳಿ , ಪುನಃ ಅಲ್ಲಿ ನೆರೆದಿದ್ದ ಜನಸ್ತೋಮವನ್ನು ದಾಟಿ ಬಾಗಿಲ ಬಳಿ ಹೋಗಬೇಕೆಂದು ಮನಸ್ಸಿನ್ನಲೇ ಲೆಕ್ಕಾಚಾರ ಹಾಕ ತೊಡಗಿದೆ . ಅಷ್ಟರಲ್ಲಿ , ಅದೇ ಆಸಾಮಿ , " ಚೆನ್ನಾಗಿ ಓದಿ , ಒಂದು ಕೆಲ್ಸಕ್ಕೆ ಸೇರ್ಕೊಳಿ . ನೆಮ್ಮದಿಯಿಂದ ಜೀವನ ನಡೆಸಿ . ಆ ಬಡ್ಡಿ ಹೈದನ್ ( ತನ್ನ ತಮ್ಮನ ) ತರಾ ಚಂಗ್ಲು ಬುದ್ಧಿ ಕಲೀಬೇಡಿ . ಮಾದೇಶ ಒಳ್ಳೇದು ಮಾಡ್ಲಿ ! " ಎಂದು ನನ್ನನ್ನೂ , ನನ್ನ ಮಿತ್ರರನ್ನೂ ಹರಿಸಿದರು . ಕುಡುಕಪ್ಪನ ಆಶೀರ್ವಾದವನ್ನು ಪಡೆದ ನಾವೇ ಧನ್ಯರು ಎಂದು ಯೋಚಿಸಿ , ಬಸ್ಸಿನಲ್ಲಿ ತುಂಬಿದ್ದ ಜನ-ಜಂಗುಳಿಯನ್ನು ಯಶಸ್ವಿಯಾಗಿ ದಾಟಿ , ಬಾಗಿಲ ಬಳಿಯಿಂದಲೇ ಕುಡುಕಪ್ಪನ "ದಿವ್ಯ ದರ್ಶನ"ವನ್ನು ಪುನಃ ಪಡೆದುಕೊಂಡೆವು . ಕಡೇಗೂ ನಮ್ಮ ಸ್ಟಾಪ್ ಬಂದಿತು . ಬಸ್ಸಿನಿಂದ ಇಳಿದು ಕಾಲೇಜಿನೆಡೆಗೆ ದಾಪುಗಾಲು ಹಾಕತೊಡಗಿದೆವು .


ಕಾಲೇಜಿನಲ್ಲಿ ಅಂದಿನ ಪೂರ್ತಾ ದಿವಸ ನಮ್ಮ ಪ್ಲೇಸ್ಮೆಂಟ್ ಪ್ರಕ್ರಿಯೆಗೆ ಪೂರಕವಾಗಿರಲಿ ಎಂಬಂತೆ , ವಾಗ್ಮಿಗಳೂ,ವ್ಯಕ್ತಿ ವಿಕಸನದ ತರಬೇತಿದಾರರಾದ ಕೆಲವರನ್ನು ಕರೆಯಿಸಿ ಅವರಿಂದ ಒಂದು ಕಮ್ಮಟವನ್ನು ನಿಯೋಜಿಸಿದ್ದರು . ನಮ್ಮ ( ವಿದ್ಯಾರ್ಥಿಗಳ ) ಭವಿಷ್ಯ " ಕಾರ್ಪೊರೇಟ್ ಜಗತ್ತಿನಲ್ಲಿ" ಮಾತ್ರವಿದೆಯೆಂಬಂತೆ ,ನಾವು ಕಾರ್ಪೊರೇಟ್ ಬದುಕಿಗೆ ಹೇಗೆ ಒಗ್ಗಿಕೊಂಡು ನಡೆಯಬೇಕು ,ನಾವು ಕಾರ್ಪೊರೇಟ್ ಜೀವನಕ್ಕೆ ಅನುಗುಣವಾಗಿ ನಮ್ಮನ್ನು ನಾವು ಮಾರ್ಪಾಡುಗೊಳಿಸಬೇಕು ಹೇಗೆ - ಇತ್ಯಾದಿ ವಿಷಯಗಳ ಕುರಿತಾಗಿಯೇ ಮಾತನಾಡಿದರು . 




ಅಂದು ಮನೆಗೆ ಹಿಂತಿರುಗುವಾಗ ಪುನಃ "ನಾಯಂಡಹಳ್ಳಿ ಮಹಾರಾಜ"ನ ದರುಶನ ಭಾಗ್ಯವನ್ನು ಪಡೆಯಲೇಬೇಕಲ್ವೆ ? ಅದೃಷ್ಟವಶಾತ್ , ಸಂಜೆ ಬಸ್ಸಿನಲ್ಲಿ ಮನೆಗೆ ಹಿಂತಿರುಗುವಾಗ , ಅಷ್ಟಾಗಿ ಜನ-ಜಂಗುಳಿ ಇರಲಿಲ್ಲ . ಬಸ್ಸು ಮತ್ತೆ ಯಥಾಪ್ರಕಾರವಾಗಿ ನಮ್ಮ ನಾಯಂಡಹಳ್ಳಿ ಸಾಮ್ರಾಜ್ಯದಲ್ಲಿ ಬಂದು ನಿಂತಿತು . ಆಗ ನಾನು ಅಂದು ನಡೆದ ಘಟನೆಗಳನ್ನು ಒಮ್ಮೆ ವಿಮರ್ಶಿಸತೊಡಗಿದೆ . ಬೆಳಿಗ್ಗೆ ಕುಡುಕಪ್ಪನೊಟ್ಟಿಗೆ ನಡೆದ ಹೃದಯಸ್ಪರ್ಶೀ ಸಂಭಾಷಣೆ , ಆತ ನಾನು ಹುಟ್ಟಿ-ಬೆಳೆದಿರುವ ಸ್ಥಳವಾದ ಬೆಂಗಳೂರಿಗೆ "ಹಾಳಾಗಿ ಹೋಗುತ್ತೆ" ಎಂದು ಶಾಪ ನೀಡಿದ್ದು , ಇಲ್ಲಿನ ಜನರಲ್ಲಿ ನೆಮ್ಮದಿಯ ಕಾಣೆ ಎಂಬ ಅವನ ಉಕ್ತಿ - ಇವೆಲ್ಲವೂ ಒಂದು ಕಡೆಯಾದರೆ ; ಇದು ಕಾರ್ಪೊರೇಟ್ ಯುಗ . ಟ್ರೆಂಡ್ ಗೆ ತಕ್ಕಹಾಗೆ ಬದಲಾಗಬೇಕು , ಈ ಕಾರ್ಪೋರೇಟಿಸಂ ನಲ್ಲಿ ಹೆಚ್ಚಾಗುತ್ತಿರುವ ಹಗ್ಗ-ಜಗ್ಗಾಟದ ನಡುವೆ ಬದುಕುವುದು ಹೇಗೆ , ದುಡ್ಡೇ ಸರ್ವವೂ ಎಂಬ ನೀತಿ , ಈಗಿನವರ ಯಾಂತ್ರಿಕ ಬದುಕು - ಇವೆಲ್ಲವೂ ಮತ್ತೊಂದು ಕಡೆ . ಒಟ್ಟಿನಲ್ಲಿ ನಾನು ಯಾವುದೇ ಸ್ಪಸ್ಟ ನಿರ್ಧಾರಕ್ಕೆ ಬರಲಾಗಲ್ಲಿಲ್ಲ . ಇಷ್ಟು ಯೋಚಿಸುತ್ತಿರುವಾಗಲೇ ಸಿಗ್ನಲ್ ಬಿಟ್ಟು ಕೊಂಚ ಸಮಯವೇ ಆಗಿರಬೇಕು . ನಾನು ಇಳಿಯಬೇಕಿದ್ದ ನಿಲ್ದಾಣ ಇನ್ನೇನು ಬಂದೇಬಿಟ್ಟಿತು . 



ಕಡೇ ಮಾತು :

ನಾಯಂಡಹಳ್ಳಿ , ಬಹಳಷ್ಟು ಹೊತ್ತು ನಮ್ಮನ್ನು , ತನ್ನ ಬಳಿ ಇರಿಸಿಕೊಂಡು ಕಾಯಿಸಿದರೂ ; ಮನರಂಜನೆಗಾಗಿಯೂ , ನಮ್ಮ ವಿಚಾರ ಸರಣಿಗೆ ಹೊಸ ದೃಷ್ಟಿಕೋನವನ್ನು ನೀಡಲೂ - ಇಂತಹ ಹಲವಾರು ಘಟನೆಗಳನ್ನು ಪ್ರತಿ-ನಿತ್ಯ ನಮಗೆ ಉಡುಗೊರೆಯನ್ನಾಗಿ ನೀಡುತ್ತಾ , ನಮ್ಮ ಕಾಯುವಿಕೆಯ ನೋವನ್ನು ದೂರಮಾಡುತ್ತದೆ . ಈ ನಾಯಂಡಹಳ್ಳಿಯಲ್ಲಿ ಹಲವಾರು ಹೊಸ ಮಿತ್ರರ ಪರಿಚಯ ನನಗಾಗಿದೆ , ಸ್ನೇಹಿತರೊಡನೆ ವಿಚಾರ-ವಿನಿಮಯವಾಗಿದೆ , ವಿವಿಧ ವಿಷಯಗಳ ಬಗೆಗೆ ವಾದ-ಚರ್ಚೆಗಳೂ ನಡೆದಿದೆ , ಆಟ-ಪುಂಡಾಟಗಳೂ ನಡೆಯುತ್ತಲೇ ಇರುತ್ತವೆ .ಒಟ್ಟಿನಲ್ಲಿ ,ನಮ್ಮ ನಾಯಂಡಹಳ್ಳಿ , ತನ್ನ ಮೂಲಕ ಹಾದುಹೊಗುವವರ ನಿತ್ಯ ಜೀವನದ ಒಂದು ಅವಿನಾಭಾಜ್ಯ ಅಂಗ ! 



ಇಂತಹ , ನಾಯಂಡಹಳ್ಳಿ ಮಹಾರಾಜನಿಗೆ ಜಯವಾಗಲಿ ! ಶುಭವಾಗಲಿ ! ಕಂಗೊಳಿಸಲಿ ! 




ನಮಸ್ಕಾರಗಳೊಂದಿಗೆ .....

( ವಾಚಕರು ಮುದ್ರಾರಾಕ್ಷಸನ ಹಾವಳಿಯನ್ನು ಕ್ಷಮಿಸಲಿ .... )




ನಂದನ - ವೈಶಾಖ - ತದಿಗೆ 

(  ೨೪-೦೪-೨೦೧೨ )






   



Sunday 29 January 2012

"ಕರ್ವಾಲೊ" - ಒಬ್ಬ ವಿಜ್ಞಾನಿ ಕಾಲಜ್ಞಾನಿ ಆಗಿ ರೂಪುಗೊಳ್ಳುವ ಅಚ್ಚರಿಯ ಕಥೆ !




ಬಹಳ ವರುಷಗಳ ಹಿಂದೆ ನಮ್ಮ ತಂದೆಯವರು ನನ್ನೊಡನೆ ಯಾವುದೋ ವಿಚಾರವಾಗಿ ಚರ್ಚಿಸುತ್ತಾ " ನೋಡಯ್ಯ .. ತೇಜಸ್ವಿಯವರು ಕುವೆಂಪು ಅವರ ಮಗನಾದರೂ , ತಮ್ಮ ತಂದೆಯವರ ಪ್ರಭಾವವನ್ನು ಉಪಯೋಗಿಸದೇ , ಯಾರದೇ ಕೃಪಾಕಟಾಕ್ಷಗಳಿಗೆ ಪಾತ್ರರಾಗದೇ ತಮ್ಮದೇ ಆದ ಒಂದು ಸ್ವಂತ ವ್ಯಕ್ತಿತ್ವವನ್ನು ಬೆಳೆಸಿಕೊಂಡಿರುತ್ತಾರೆ . ಅವರು ಬರೆದಿರುವ ಪುಸ್ತಕಗಳನ್ನು  ಬಿಡುವಿದ್ದಾಗ ಓದು .... ಬಹಳ ಸೊಗಸಾಗಿರುತ್ತದೆ " ಎಂದು ಹೇಳಿದ್ದರು . ಹೀಗೆಯೇ ಬಹಳ ಮಂದಿ ಶ್ರೀಯುತ ಪೂರ್ಣಚಂದ್ರ ತೇಜಸ್ವಿ ಅವರ ಪುಸ್ತಕಗಳನ್ನು ಓದಲು ನನಗೆ ಸಲಹೆ ನೀಡುತ್ತಲೇ ಬಂದಿದ್ದರು . 

ಮೂಲತಃ , ಶ್ರೀಯುತ ಗೊ.ರಾ.ಅಯ್ಯಂಗಾರ್ ರ ಲಲಿತ ಪ್ರಭಂಧಗಳನ್ನೂ,ಹಾಸ್ಯ-ಪುಸ್ತಕಗಳನ್ನು ಓದುತ್ತಿದ್ದ ನಾನು , "ಪ್ರಕೃತಿಯ ನಿಯಮವೇ ಬದಲಾವಣೆ" ಎಂಬ ಮಾತಿನಂತೆ , ಇತ್ತೀಚೆಗೆ ತೇಜಸ್ವಿ ಅವರ ಪುಸ್ತಗಳನ್ನು ಓದಲು ಶುರು ಮಾಡಿದೆ ! ಅದರಂತೆ ಅವರ "ಕರ್ವಾಲೊ" ಎಂಬ ಪುಸ್ತಕವನ್ನು ಓದಿ ಮುಗಿಸಿದೆ . ಓದಿ ಮುಗಿಸುತ್ತಿದಂತೆಯೇ ನನ್ನಲ್ಲಿ ಆದ ಒಂದು ಬಗೆಯ ರೋಮಾಂಚನ ಅನಿರ್ವಚನೀಯ ! ಹಾಗೆಯೇ ನನ್ನಲ್ಲಿ ಒಳ ಹೊಕ್ಕು ಕುಳಿತಿರುವ ಒಬ್ಬ ತಾತ್ವಿಕ ಚಿಂತಕ ನನ್ನಲ್ಲಿ ಹಲವಾರು ವಿಚಿತ್ರ-ವಿಶಿಷ್ಟ ಪ್ರಶ್ನೆಗಳನ್ನು ಕೇಳ ತೊಡಗಿದ . ನನ್ನಲ್ಲಿ ನೆಲೆಸಿರುವ ವಿಜ್ಞಾನದ ವಿದ್ಯಾರ್ಥಿ ಪ್ರಪಂಚದ ಸೃಷ್ಟಿ-ಸ್ಥಿತಿ-ಲಯದ ಬಗೆಗೆ ತರಹ-ವಿಚಿತ್ರ ಪ್ರಶ್ನೆಗಳನ್ನು ವ್ಯಕ್ತಪಡಿಸತೊಡಗಿದ ! 

ಹಾಗಿದ್ದರೆ , ಯಾರು ಈ 'ಕರ್ವಾಲೊ' ? ಏಕೆ ಈ ಪುಸ್ತಕ ಅಷ್ಟು ಪ್ರಶಂಸನೀಯ ?

ಕರ್ವಾಲೊ ಕಥೆ ಕಗ್ಗಾಡಿನ ಹಳ್ಳಿ ಕೊಂಪೆಯೊಂದರಲ್ಲಿ ನಡೆಯುವ ಘಟನೆ . ಹಳ್ಳಿಯ ಮಂದಣ್ಣ , ಪ್ರಭಾಕರ , ಎಂಗ್ಟ , ಕರಿಯಪ್ಪ ಮುಂತಾದವರೊಡನೆ ಬೆರೆತು ವಿಜ್ಞಾನಿ ಕರ್ವಾಲೊ ಕಾಲಜ್ಞಾನಿಯಾಗಿ ರೂಪುಗೊಳ್ಳುವ ಅಚ್ಚರಿಯ ಕಥೆ ! ಧರ್ಮ,ಧ್ಯಾನ,ತಪಸ್ಯೆಗಳಂತೆಯೇ ವಿಜ್ಞಾನವೂ ಸಾಕ್ಷಾತ್ಕಾರದ ದಾರಿ ಎಂದು ಪ್ರತಿಪಾದಿಸುವ ಈ ಕೃತಿ ಕನ್ನಡದ ಎಲ್ಲಾ ಕಾದಂಬರಿಗಳಿಗಿಂತ ಸಂಪೂರ್ಣ ಭಿನ್ನವಾದ ಕೃತಿ ! 

ಎಲ್ಲಾ ಕಥೆ-ಕಾದಂಬರಿಗಳಂತೆ ,ಲೇಖಕರು ತಮ್ಮ ಜವಾಬ್ದಾರಿಯನ್ನು  ಕೇವಲ "ನಾಟಕೀಯ ವಿವರಣೆ"ಗೆ ಸೀಮಿತಗೊಳಿಸದೆ , ಇಲ್ಲಿ ನಡೆಯುವ ಎಲ್ಲಾ ಘಟನೆಗಳಲ್ಲಿಯೂ , ಸಾಹಸ-ಪ್ರಸಂಗಗಳಲ್ಲಿಯೂ , ತತ್ವ-ಚಿಂತನೆಗಳಲ್ಲಿಯೂ ಸ್ವತಃ ಪಾತ್ರವನ್ನು ವಹಿಸಿ ತಮ್ಮ ಅನುಭವವನ್ನು ವಿವರಿಸಿದಂತಿದೆ . 

"ಕರ್ವಾಲೊ" ಕಥೆ ಮೂಡುಗೆರೆಯ 'ಜೇನು ಸೊಸೈಟಿ'ಯಲ್ಲಿ ಪ್ರಾರಂಭವಾಗುತ್ತದೆ .  ಮೊದಲಿಗೆ ಮಂದಣ್ಣ , ಲಕ್ಷ್ಮಣ , 'ಸಾಬಿ' ಪ್ಯಾರ , ಸ್ಪಾನಿಯಲ್ ನಾಯಿ 'ಕಿವಿ' ಮುಂತಾದವರನ್ನು  ಒಡಗೂಡಿ , ಲೇಖಕರು  ಜೇನು ಹುಳುಗಳಲ್ಲೇ ಇರುವ ಅನೇಕ ವಿಧವನ್ನು ಪರಿಚಯಿಸುತ್ತಾ , ಅವುಗಳ ಆಹಾರಾಭ್ಯಾಸದ  ವಿಚಾರವನ್ನೂ , ಗೂಡು ಕಟ್ಟುವ ವಿಧಾನವನ್ನೂ , ಜೇನು ಹಲ್ಲೆ ಕಟ್ಟುವ ಪರಿಯನ್ನೂ , ಅದರಿಂದ ಜೇನು ಹೊರತೆಗೆಯುವ ರೀತಿಯುನ್ನೂ ಅನೇಕ ದೃಷ್ಟಾಂತಗಳ ಮೂಲಕ ಸೊಗಸಾಗಿ ತಮ್ಮದೇ ಶೈಲಿಯಲ್ಲಿ  ವಿವರಿಸುತ್ತಾ ನಮ್ಮನ್ನು ಜೇನುಗಳ ವಿಸ್ಮಯಾಲೋಕಕ್ಕೆ ಕರೆದೊಯ್ಯುತ್ತಾರೆ ! ನಂತರ ಲೇಖಕರಿಗೆ , ಬಹಳ ಪ್ರಸಿದ್ಧ  ಸಸ್ಯವಿಜ್ಞಾನಿ ಮತ್ತು ಕೀಟ ಶಾಸ್ತ್ರಜ್ಞರಾದ 'ಕರ್ವಾಲೊ' ಅವರ ಪರಿಚಯವಾಗುತ್ತದೆ . ಆ ವೇಳೆಗಾಗಲೇ ಕರ್ವಾಲೊ , 'ಹಳ್ಳಿ ಗಮಾರ' ಮಂದಣ್ಣ ತೋರಿಸಿದ  "Glow Worm " ಎಂಬ ವಿಚಿತ್ರ ಹುಳುವಿನ ಅಧ್ಯಯನದಲ್ಲಿ ತೊಡಗಿರುತ್ತಾರೆ .

" ಈ ಹುಳುವನ್ನು ಇಷ್ಟರವರೆಗೆ ಯಾರೂ ಕಂಡಿರಲಿಲ್ಲ . ಭಾರತದಿಂದ ಇದೆ ಮೊದಲ ಬಾರಿಗೆ ರಿಪೋರ್ಟ್ ಆಗ್ತಿರೋದು . ಈ ಹುಳುವಿನ ಬಾಲದಲ್ಲಿ ಎರಡು ದೀಪಗಳಿವೆ .... ನೋಡಿದ್ರಾ ...  ಅದಕ್ಕೇನಾದರೂ ಅಪಾಯದ ಸೂಚನೆ ಬಂದರೆ ಸಾಕು ವೈರಿಗಳನ್ನು ಹೆದರಿಸಿ ಓಡಿಸಲು ಅದರ ಬಾಲದ ಕಡೆಯಿಂದ ನೀಲಿಯ ಬೆಳಕನ್ನು ಚೆಲ್ಲುವ ಆ ಎರಡು ದೀಪಗಳು ಹತ್ತಿಕೊಳ್ಳುತ್ತದೆ "  - ಇವೆ ಮೊದಲಾದ "Glow Worm"ನ ವರ್ಣನೆಯನ್ನು  ಕರ್ವಾಲೊ ಅವರಿಂದ ಕೇಳುತ್ತಲೇ ಲೇಖಕರು ( ಓದುಗರೂ ) ಮೂಕವಿಸ್ಮಿತರಾಗುತ್ತಾರೆ ! 

ಹೀಗೆ 'ಕರ್ವಾಲೊ'ವಿನ ಕಥೆ ನಮ್ಮ ಜ್ಞಾನ ಭಂಡಾರವನ್ನು ವೃಧಿಸುತ್ತಾ ಸಾಗುತ್ತಿರಬೇಕಾದರೆ.....  ಒಮ್ಮೆ ಕರ್ವಾಲೊ ಸಾಹೇಬರು ಲೇಖಕರಿಗೆ  , ಮಂದಣ್ಣನು " ಹಾರುವ ಓತಿ " ( Flying Lizard ) ಒಂದನ್ನು ಕಾಡಿನಲ್ಲಿ ನೋಡಿದ್ದಾನೆಂದೂ ,  ಇದು ಸ್ಥೂಲವಾಗಿ ಮೂರು ಮಿಲಿಯನ್ ವರುಷಗಳಿಗಿಂತ ಹಿಂದಿನದು ಮತ್ತು ಸರ್ವರೂ ಅದು ನಿಃಶೇಷವಾಗಿದೆಂದು ನಂಬಿದ್ದಾರೆ  ಮತ್ತು ಇದರ ಒಂದು ಮಿಂಚು ನೋಟ ಸಿಕ್ಕರೂ ಸಾಕೆಂದು ಜಗತ್ತಿನಾದ್ಯಂತ ವಿಜ್ಞಾನಿಗಳು ತಮ್ಮ ಕಾಲ,ಜೀವನ,ಹಣ ಎಲವನ್ನೂ ಮುಡುಪಾಗಿಟ್ಟುಕೊಂಡು ಹಂಬಲಿಸುತ್ತಿದ್ದಾರೆಂದೂ ತಿಳಿಸುತ್ತಾರೆ . ಇಂತಹ , ಇಡಿಯ ಜಗತ್ತೇ ಬೆಚ್ಚಿಬೀಳುವಂಥಹ ಸಮಾಚಾರವನ್ನು ಹೊರ ಪ್ರಪಂಚಕ್ಕೆ ತಿಳಿಸುವ ಮೊದಲು ತಾವೊಮ್ಮೆ ಸ್ವತಃ  ನೋಡಿಬರಬೇಕೆಂದು ಕಾಡಿಗೆ ಹೊರಡುವ ತಯಾರಿಯಲ್ಲಿ ಇದ್ದೇವೆ , ನೀವು ಕೂಡ ಬನ್ನಿ ಎಂದು ಲೇಖಕರನ್ನು ಆಹ್ವಾನಿಸುತ್ತಾರೆ !

ಅದರಂತೆ ಕರ್ವಾಲೊ , ಲೇಖಕರು , ಮಂದಣ್ಣ , 'ಫೋಟೊಗ್ರಾಫರ್ ' ಪ್ರಭಾಕರ , 'ಬಿರಿಯಾನಿ' ಕರಿಯಪ್ಪ , ಸ್ಪಾನಿಯಲ್ ನಾಯಿ 'ಕಿವಿ' , ದಾರಿಯಲ್ಲಿ ಸಿಗುವ ಎಂಗ್ಟ - ಮಲೆನಾಡಿನ ದಟ್ಟವಾದ ಕಾಡಿನಲ್ಲಿ ಬಂದೊದಗುವ  ಅಡೆ ತಡೆಗಳನ್ನೆಲ್ಲಾ ಲೆಕ್ಕಿಸದೇ , ಆ ಮೂರು ಮಿಲಿಯನ್ ವರುಷಗಳಿಗಿಂತ ಹಿಂದಿನ 'ಹಾರುವ ಓತಿಯ'ನ್ನು  ಅರಸುತ್ತ ಸಾಗುವುದೇ ಈ ಕಥೆಯ ಜೀವಾಳ  ! 

ಕಾಡಿನಲ್ಲಿ ಅವರ ನಡುವೆ ನಡೆಯುವ ಚರ್ಚೆ-ಸಂಭಾಷಣೆಗಳು , ತಾತ್ವಿಕ-ಚಿಂತನೆಗಳು , ಅಲ್ಲಿ ನಡೆಯುವ ವೈಜ್ಞಾನಿಕ ಆವಿಷ್ಕಾರ ಈ ಕೃತಿಯ ಮತ್ತು ರಚಿಸಿದ ಲೇಖಕರ ಪ್ರಭುದ್ಧತೆಗೆ ಕೈಗನ್ನಡಿಯಂತಿದೆ !

ಅವರು ತಮ್ಮ ಸಾಹಸ-ಕಾರ್ಯದಲ್ಲಿ ಯಶಸ್ವಿಯಾದರೇ ? ಅರ್ಥಾತ್, ಅವರು ಹಾರುವ-ಓತಿಯನ್ನು ಹಿಡಿಯಲು ಮಾಡುವ ಪ್ರಯತ್ನದಲ್ಲಿ ಜಯಗಳಿಸಿದರೇ ? ಅಥವಾ ಅವರ ಶ್ರಮ ವ್ಯರ್ಥವಾಯಿತೇ  ? - ಎಂಬುದೆಲ್ಲಾ ಕಡೇಗೆ ಅಪ್ರಸ್ತುತವಾಗುತ್ತದೆ  !

ಏಕೆಂದರೆ ಲೇಖಕರು "ಹಾರುವ ಓತಿ"ಯ ಮಹತ್ವವನ್ನು ಕೇವಲ ಸಾಹಸೀತನಕ್ಕೆ ಸೀಮಿತಗೊಳಿಸಿರುವುದಿಲ್ಲ ! ಬದಲಿಗೆ ಅದು ಜೀವ-ವಿಕಾಸದಲ್ಲಿ,ಕಾಲದ ಅನಂತತೆಯಲ್ಲಿ , ಸತ್ಯದ ಅನ್ವೇಷಣೆಯಲ್ಲಿರುವ ಪ್ರತಿಯೊಬ್ಬರಲ್ಲಿಯೂ ಆಲೋಚನೆ,ಕನಸುಗಳನ್ನು ಪ್ರಚೋದಿಸುವ ಸಾಂಕೇತಿಕ ರೂಪವಾಗಿ ಚಿತ್ರಿಸಿದ್ದಾರೆ ಎಂಬುದು ನನ್ನ ಭಾವನೆ ! ಆ ನಿಟ್ಟಿನಲ್ಲಿ ಲೇಖಕರು ಬಹು-ಪಾಲು ಯಶಸ್ವಿಯಾಗಿ ,ನಮಲ್ಲಿ , ಸನ್ಮಾನ್ಯ ಡಿ.ವಿ.ಜಿ ಅವರ ಮಾತಿನಂತೆ 

ಏನು ಜೀವನದರ್ಥ? ಏನು ಪ್ರಪಂಚಾರ್ಥ? ।
ಏನು ಜೀವಪ್ರಪಂಚಗಳ ಸಂಬಂಧ? ॥
ಕಾಣದಿಲ್ಲಿ‍ರ್ಪುದೇನಾನುಮುಂಟೆ? ಅದೇನು? ।
ಜ್ಞಾನಪ್ರಮಾಣವೇಂ? – ಮಂಕುತಿಮ್ಮ 


ಜೀವನ ಎಂದರೇನು ? ಪ್ರಪಂಚ ಎಂದರೇನು ?
ಈ ಜೀವ-ಪ್ರಪಂಚಗಳ ಸಂಬಂಧವಾದರೂ ಎಂತಹುದು ?
ನಾವು ಕಾಣದೇ ಇರುವುದಾವುದಾದರೂ ಉಂಟೇ ? ಹಾಗೆ ಇದ್ದರೇ , ಯಾವುದದು ?
ಕೇವಲ ಜೀವಿಯ ಜ್ಞಾನ ಅದರ ಅಸ್ತಿತ್ವ  - ಅದರ ಅಸ್ತಿತ್ವ ಇಲ್ಲದಿರುವುದಕ್ಕೆ ಸಾಕ್ಷಿಯೇ ? - ಮಂಕುತಿಮ್ಮ 

- ಇವೇ ಮೊದಲಾದ ತಾರ್ಕಿಕ-ತಾತ್ವಿಕ ಚಿಂತನ-ಮಂಥನಗಳಿಗೆ ನಾಂದಿ ಹಾಡುತ್ತಾರೆ ! 

ಪಠ್ಯಕ್ಕೇ ಸೀಮಿತಗೊಳಿಸಿ, ಪಠ್ಯ-ಪುಸ್ತಕದ ಆಚೆಗೆ ಯೊಚನೆ ಮಾಡಲೂ ಪ್ರಚೊದಿಸದ  ಈಗಿನ ಶೈಕ್ಷಣಿಕ ಪದ್ಧತಿ ಒಂದೆಡೆಯಾದರೆ , "ಕರ್ವಾಲೋ" ಅಂತಹ ಸೃಜನಾತ್ಮಕ , ಚಿಂತನ-ಮಂಥನಗಳಿಗೆ ಸ್ಪೂರ್ತಿಯಾಗಿರುವ ಕೃತಿ ಮತ್ತೊಂದೆಡೆ !

ಇಂತಹ ಕೃತಿ ಕನ್ನಡದಲ್ಲಿ ರಚಿತವಾಗಿದೆ ಎಂಬುದು ಇನ್ನೊಂದು ಹೆಮ್ಮೆಯ ವಿಷಯ. ಇತ್ತೀಚೆಗೆ ನಾನು , ನನ್ನ "ಸಂಸ್ಕೃತ ಪ್ರೇಮಿ" ತಮ್ಮನೊಡನೆ ಯಾವುದೋ ವಿಷಯವಾಗಿ ಚರ್ಚಿಸುತ್ತಿದ್ದಾಗ ... ಆತ " ಅಯ್ಯೋ ! ನಿಮ್ಮ ಕನ್ನಡ ಸಾಹಿತ್ಯ ಬಿಡಯ್ಯ ...  'ABCD  ನಾ .. ಆಲೂ  ಗೆಡ್ಡೆ  ನಾ .. ಗೋಡೆ  ಹಲ್ಲಿ  ನಾ .. ಯಾವನಿಗ್  ಗೊತ್ತು ? ' ಅಂತ ಸಿನಿಮಾ ಹಾಡು ಬರ್ಯೋದಕ್ಕೆ ಸೀಮಿತ  ! " ಎಂದು ಗೇಲಿ ಮಾಡಿದ . ದುರದೃಷ್ಟಕರ ಸಂಗತಿ ಎಂದರೆ ಈತನ ಹಾಗೆ ಹಲವಾರು ಮಂದಿ ಕನ್ನಡ ಸಾಹಿತ್ಯದ ಅರಿವೇ ಇಲ್ಲದೇ , ಈಗಿನ "ಅರ್ಥ-ರಹಿತ" ಸಿನಿಮಾ ಸಾಹಿತ್ಯವನ್ನು ಅಸ್ತ್ರವಾಗಿಸಿಕೊಂಡು , " ಕನ್ನಡದಲ್ಲಿ ಏನಿದೆ ?" " ಕನ್ನಡ-ಸಾಹಿತ್ಯಕ್ಕೆ ಬೆಲೆ ಏನಿದೆ ? " ಎಂದು ಟೀಕಿಸುತ್ತಿರುವವರನ್ನು ನಾವು ನೋಡಬಹುದು . ಅಂತಹವರು "ಕರ್ವಾಲೊ" ಪುಸ್ತಕವನ್ನು ಒಮ್ಮೆ ಅಧ್ಯಯನ ಮಾಡಿದ ನಂತರ ಆ ಮಾತುಗಳನ್ನು ಖಂಡಿತ ಹೇಳಲಾರರು ಎಂಬುದು ನನ್ನ ನಂಬುಗೆ .

ಒಟ್ಟಿನಲ್ಲಿ , ಶ್ರೀಯುತ ತೇಜಸ್ವಿ ಅವರ "ಕರ್ವಾಲೊ" ಸರ್ವಕಾಲಕ್ಕೂ  ಅನ್ವಯಿಸುವಂತಹ ಮತ್ತು ಸರ್ವರೂ ಓದಿ ತಿಳಿಯಬೇಕಾದಂತಹ ಅಭೂತಪೂರ್ವ ಕೃತಿ . ಇಂತಹ ಸೃಜನಾತ್ಮಕ ಕೃತಿಗಳು ಕನ್ನಡದಲ್ಲಿ ಇನ್ನು ಹೆಚ್ಚು-ಹೆಚ್ಚು ಬರುವಂತಾಗಲಿ !

ನಮಸ್ಕಾರಗಳೊಂದಿಗೆ ...

Saturday 26 November 2011

ಗೆಳೆಯ ’ಸಮೀರ್’ ಇಪ್ಪತನೇ ವಸಂತಕ್ಕೆ ಕಾಲಿಟ್ಟ ಸವಿ ನೆನಪಿನಲ್ಲಿ :)


೨೬-೧೧-೨೦೧೧

ನಾನು ನಂಬಿರುವಂತೆ , ಶಿಕ್ಷಣವು ಕೇವಲ ಕ್ಲಾಸ್ ರೂಮಿನ ನಾಲ್ಕು ಗೊಡೆಗೆ ಸೀಮಿತವಾದ್ದುದ್ದಲ್ಲ . ಅದರಲ್ಲೂ ರಾ.ವಿ.ಕಾಲೇಜ್ ಎಂಬ ವಿವಿಧತೆಯ ಜಗತ್ತಿನಲ್ಲಿ ಪ್ರತಿಕ್ಷಣವೂ ಕಲಿಕೆಯೇ !! " ಒಂದು ಅಕ್ಷರಂ ಕಲಿಸಿದಾತಂ ಗುರು " ಎಂಬ ಮಾತಿನಂತೆ ಇಲ್ಲಿ ಕಾಣುವ ನನ್ನ ಪ್ರತಿಯೊಬ್ಬ ಗೆಳೆಯನೂ ಗುರುವೇ !! ಇದು ಕೇವಲ ಅತಿಶಯೋಕ್ತಿಯಲ್ಲ . ಇದು ಸತ್ಸಂಗತಿ . ಇಲ್ಲಿ , ನಾನು ಕಂಡ ಪ್ರತಿಯೊಬ್ಬರೂ ತಮ್ಮದೇ ಕ್ಷೇತ್ರದಲ್ಲಿ ನಿಪುಣರೂ-ಅದ್ವಿತೀಯರೂ ಆಗಿರುತ್ತಾರೆ . ಇಂತಹ ಶ್ರೇಷ್ಠರ ಪೈಕಿ , " ಸಮೀರ್ ಶರೀಫ್ " ಎಂಬ ಭೂಪ ಕಲಶಪ್ರಾಯವಿದ್ದಂತೆ . ಓ , ಯಾರೀತ ಎಂಬ ಪ್ರಶ್ನೆ ನಿಮ್ಮಲ್ಲಿ ಸಹಜವಾಗಿ ಮೂಡುತ್ತದೆ ಅಲ್ವಾ ? ಕೇಳಿ ನನ್ನ ಪ್ರೀತಿಯ "ಗಾಡ್-ಫಾದರ್"ನ ಯಶೋಗಾಥೆಯನ್ನು ...

 ' ಸಮೀರ್ ನ ಮೊದಲ ಹೆಂಡತಿ ಕೋಡಿಂಗ್  ' :

 ಹೌದು ... ಈತ ಪ್ರೋಗ್ರಾಮ್ ಗಳನ್ನು ರಚಿಸುವ ಪರಿ , ಪಡುವ ಪರಿಶ್ರಮ , ಅದರಲ್ಲಿ ಕಾಣುವ ಸಾರ್ಥಕತೆ ಎಂತಹವರನ್ನು ನಿಬ್ಬೆರಗಾಗಿಸುತ್ತದೆ. ಈತ "ಜಾವ" ಭಾಷೆಯ ಮೇಲೆ ಸಾಧಿಸಿರುವ ಅಧಿಪತ್ಯವನ್ನು ಮೆಚ್ಚಲೇಬೇಕು . ಇದಕ್ಕೆ ಪೂರಕ ಎಂಬಂತೆ ಕೆಲವಾರು "ಗೇಮ್" ಗಳನ್ನು ತನ್ನ ಸ್ವಂತ-ಜ್ಞಾನದ ಆಧಾರದ ಮೇಲೆ ರಚಿಸಿರುವುದು, ಈತನ ಸೃಜನಶೀಲತೆಗೆ  ಸಾಕ್ಷಿ.
http://jinkchak.wordpress.com/category/programming/

’ಸಮೀರ್-ಸಾತ್ವಿಕ್’ಜೋಡಿ ಎಂದರೆ ಎಂತಹ ಕೋಡಿಂಗ್ ಸ್ಪರ್ಧೆಗಳಲ್ಲಿಯೂ ಗೆಲ್ಲುವ ನೆಚ್ಚಿನ ಕುದುರೆಗಳಲ್ಲಿ ಒಂದು , ಎಂಬ ಮಾತು ನಮ್ಮ ಇಡೀ ಕಾಲೇಜಿಗೆ ತಿಳಿದಿರುವ ವಿಷಯ !!

 "
 ಸೀನು ಸುಬ್ಬು ಸುಬ್ಬು ಸೀನು .....ಸೀನು ಸುಬ್ಬು ಸುಬ್ಬು ಸೀನು
 ಸೀನು ಸುಬ್ಬು ಸುಬ್ಬು ಸೀನು .....ಸೀನು ಸುಬ್ಬು ಸುಬ್ಬು ಸೀನು
 ಬಲು ಅಪರೂಪ ನಮ್ ಜೋಡಿ ಎಂಥ ಕಛೇರಿಗು ನಾವ್ ರೆಡಿ !!

 "
 ಎಂಬ ಲಗ್ನ-ಪತ್ರಿಕೆ (1967) ಹಾಡು , ಇವರನ್ನು ನೋಡಿದಾಗ ನೆನಪಾಗುತ್ತೆ  !!


’ ಆಂಗ್ಲ ಭಾಷೇಯೇ ಈತನಿಗೆ ಶರಣಾಗಿದೆ ’ :

"ಆಡು ಮುಟ್ಟದ ಸೊಪ್ಪಿಲ್ಲ .... ಸಮೀರ್ ಓದದ ಗ್ರಂಥವಿಲ್ಲ" - ಈತ ಲೆಕ್ಕವಿಲ್ಲದಷ್ಟು ಆಂಗ್ಲದ ಕಥೆ,ಕವಿತೆ,ಕಾದಂಬರಿಗಳನ್ನು ಓದಿರುತ್ತಾನೆ. ಈತ ತನ್ನ ಲೇಖನಗಳಲ್ಲಿ ಬಳಸುವ ಆಂಗ್ಲ ಪದಗಳನ್ನೂ, ನುಡಿಗಟ್ಟುಗಳನ್ನೂ ಓದಿದ ಮೇಲಂತೂ, ಆಂಗ್ಲ ಭಾಷೆಯೇ ಈತನ ಅಣತಿಯ ಮೇರೆಗೆ ನಾಟ್ಯವಾಡುತ್ತಿದೆಯೇನೋ ಎಂಬಂತೆ ನನಗೆ ಭಾಸವಾಗಿದೆ . ಈತನ ಒಡನಾಟದಿಂದ ನನ್ನ ಆಂಗ್ಲ ಭಾಷೆಯ ಜ್ಞಾನ , ಕೊಂಚ ಮಟ್ಟಿಗಾದರೂ ವೃದ್ಧಿಸಿದೆ ಎಂದರೆ ತಪ್ಪಾಗಲಾರದು . ಆಂಗ್ಲ ಸಿನೆಮಾಗಳನ್ನು ನಾನು ಹೆಚ್ಚಾಗಿ ನೋಡಲು ಕೂಡ ಈತನೇ ನನಗೆ ಸ್ಪೂರ್ತಿ .


’ Jinkchak ನ  ಕರ್ತೃ ’ :

 Jinkchak : http://jinkchak.wordpress.com/ - ಎಂಬುದು ನಮ್ಮ ಕಾಲೇಜಿನಲ್ಲಿ ಅತಿ ಹೆಚ್ಚು ಪ್ರಚಲಿತವಾದ ಬ್ಲಾಗ್ ಗಳಲ್ಲಿ ಅಗ್ರ-ಪಂಕ್ತಿಯಲ್ಲಿದೆ . ಈ ಬ್ಲಾಗಿನಲ್ಲಿ ಹಾಸ್ಯ ಕಥೆಗಳು , ಕಾಲೇಜಿನಲ್ಲಿ ನಡೆಯುವ ಘಟನೆಗಳ ಹಾಸ್ಯಾತ್ಮಕ ಶೈಲಿಯ ವರ್ಣನೆ , ಪ್ರವಾಸ ಕಥನ , ತಂತ್ರಜ್ಞಾನ ವಿಷಯಗಳು  - ಇವೇ ಮೊದಲಾದವುಗಳನ್ನು ನಾವು ನೋಡಬಹುದು . ಸಣ್ಣ ಅಂಕಣದಿಂದ ಶುರುವಾದ ಈ ಬ್ಲಾಗ್ ಈಗ ಹೆಮ್ಮರವಾಗಿ ಬೆಳದಿದೆ . ಇದು ಹೆಚ್ಚೆಚ್ಚು ಪ್ರಚಲಿತವಾದಂತೆ , ಹುಡುಗರು ಇದರಲ್ಲಿ ಯಾವಾಗ ಹೊಸ ಆರ್ಟಿಕಲ್ ಬರುತ್ತದೋ ಎಂದು ಹಪ-ಹಪಿಸುತ್ತಿರುತ್ತಾರೆ. ಇಂತಹ ವೈಶಿಷ್ಟ್ಯ ಪೂರ್ಣ ಬ್ಲಾಗಿನ ಒಡೆಯನೂ ಸಹ ನಮ್ಮ ಕಥಾನಾಯಕನೇ !! ಇಷ್ಟಿದ್ದರೂ ಆತ ತನ್ನ ಹೆಸರಿನಲ್ಲಿ ಅಂಕಣಗಳನ್ನು ಬರೆಯದೆ , " Me ... yeah Me  " ಎಂಬ ಮಿಥ್ಯಾನಾಮದಿಂದ ( pseudonym ) ಬರೆಯುವುದು ವಾಢಿಕೆ .


' ಸಮೀರ್ ನ Recursive ನಗು ' :

ಈತನ ನಗುವೇ ಸುಪ್ರಸಿದ್ಧ  !!  "ಓ ... ಜೋರಾಗಿ ನಗುತ್ತಾನಲ್ಲಾ , ಅವನಾ ? ಗೊತ್ತು ಬಿಡು !! " ಎಂಬ ಮಾತುಗಳನ್ನು ಕೇಳಿದ್ದೇನೆ . ಈತ ನಗದೆ ಇರುವ ಸ್ಥಳಗಳಿಲ್ಲ - ಕ್ಲಾಸ್ ರೂಮ್ ನಿಂದ ಹಿಡಿದು ಕ್ಯಾಂಟೀನ್ ತನಕ ನಗುತ್ತಿರುತ್ತಾನೆ . ಈತ ನಗಲು ದೊಡ್ಡ-ದೊಡ್ಡ  ಕಾರಣಗಳು ಬೇಕಿಲ್ಲ . ಆತನೇ ಹೇಳುವ ಹಾಗೇ

"
Once I start laughing , it recursively stimulates me to laugh again and again !! It's very difficult to come out of this chain of recursive laughing calls !!

"
 ಈತನ ನಗುವೂ Recursion  ಪಾಲಿಸುತ್ತದ್ದಲ್ಲ  ಎಂಬುದೇ ಆಶ್ಚರ್ಯಕರ ಸಂಗತಿ . ಒಟ್ಟಿನಲ್ಲಿ ಈತನ ಪ್ರಭಾವದಿಂದ , ಇಡೀ ವಾತಾವರಣವೇ ಹಸನ್ಮುಖಿ ಆದಂತೆ ಗೋಚರಿಸುತ್ತದೆ .


’ ವಿದ್ಯಾ ದಧಾತಿ ವಿನಯಂ ’ :

ಹೆಚ್ಚೆಚ್ಚು ಕಲಿಯುತ್ತಾ ಹೋದಂತೆ , ಅಹಂಕಾರವು ತನ್ನ ಬೇರುಗಳನ್ನು ಬಿಟ್ಟು ಮುಂದೇ ಪೆಂಡಂಭೂತವಾಗಿ ಕಾಡಲಾರಂಭಿಸುತ್ತದೆ . ನಿಜವಾದ ವಿದ್ಯಾವಂತ " ವಿನಯತೆ ಇಲ್ಲದ ವಿದ್ಯೆ , ಹೆಣಕ್ಕೆ ಶೃಂಗಾರ ಮಾಡಿದಂತೆ " ಎಂಬುದನ್ನು ಅರಿತಿರುತ್ತಾನೆ . ನಮ್ಮ ಕಥಾನಾಯಕ ಕೂಡ "ನಿಜವಾದ ವಿದ್ಯಾವಂತ"ರ ಸಾಲಿನಲ್ಲಿ ನಿಂತು "Down to Earth" ಆಗಿರುತ್ತಾನೆ ಮತ್ತು ಈತನ ಸ್ಥಿತಪ್ರಜ್ಞತೆಯನ್ನು ಮೆಚ್ಚಲೇಬೇಕು . ಗೆದ್ದರೂ ಹೆಚ್ಚು ಭಾವೋದ್ರೇಕಗೊಳ್ಳದೇ, ಸೋತರೂ ಹೆಚ್ಚು ದುಃಖಿಸದೇ "Puff !! It's gone !!" ಎಂದು ಹೇಳಿ ಸುಮ್ಮನಾಗುತ್ತಾನೆ . ಇದು ಸಾಧನೆಯ ಪಥದಲ್ಲಿ ಹೆಚ್ಚು-ಹೆಚ್ಚು ಕ್ರಮಿಸಿರುವವರಲ್ಲಿ ಮಾತ್ರ ಕಾಣಬಹುದು !!  .



- ಒಟ್ಟಿನಲ್ಲಿ , ನಾನು ಕಂಡ ಬಹುಮುಖ ಪ್ರತಿಭೆ ಉಳ್ಳ ವ್ಯಕ್ತಿಗಳಲ್ಲಿ ಈತನೂ ಒಬ್ಬ . ಜೀವನಕ್ಕೆ ಬೇಕಾದ ಹಲವಾರು ಮೌಲ್ಯಗಳನ್ನು ಈತನಿಂದ ನಾನು ಕಲಿತ್ತಿದ್ದೇನೆ - ಮುಂದೆಯೂ ಕಲಿಯುತ್ತಿರುತ್ತೇನೆ .


ಸನ್ಮಾನ್ಯ ಡಿ.ವಿ.ಜಿ ಅವರು ಹೇಳಿರುವಂತೆ , "ಬದುಕು ಜಟಕಾಬಂಡಿ" ಇದ್ದ ಹಾಗೆ. ಈ ಜಟಕಾಬಂಡಿಯನ್ನು ಸಾಗಿಸುವಾಗ ( ಜೀವನದಲ್ಲಿ ) ನಾವು ತರಹ-ವಿಚಿತ್ರ ಜನರನ್ನು ಕಾಣುತ್ತೇವೆ . ಕೆಲವರನ್ನು ಸಹಜವಾಗಿ ಕಾಲಕ್ರಮೇಣ ಮರೆಯುತ್ತೇವೆ . ಇನ್ನೂ ಕೆಲವರು ತಮ್ಮ ವಿಶೇಷ ನಡತೆಗಳಿಂದ-ಜೀವನ ಶೈಲಿಗಳಿಂದ ಮರೆಯಲು ಅಸಾಧ್ಯರಾಗುತ್ತಾರೆ . ನಮ್ಮ ಕಥಾನಾಯಕ ನಿಸ್ಸಂದೇಹವಾಗಿ ಎರಡನೆಯ ಗುಂಪಿಗೆ ಸೇರಿದವನು .

 ಸಮೀರ್ ಮತ್ತು ನನ್ನ ನಡುವೆ ಹಲವಾರು ವಿಷಯಗಳಲ್ಲಿ ವಿಭಿನ್ನತೆ ಇದ್ದರೂ , "ಗೆಳೆತನ" ಎಂಬ ಸೂರಿನಡಿ ನಾವೆಲ್ಲರೂ ಆಶ್ರಯ ಪಡೆದವರೇ !! ಪರಸ್ಪರ ಸೌಹಾರ್ದತೆಯಿಂದ ಸ್ನೇಹದ ಕಡಲಲ್ಲಿ ಪಯಣಿಗರಾಗಿ ಸಾಗುತ್ತಿದ್ದೇವೆ ...  ಮುಂದೆಯೂ ಸಾಗುತ್ತಿರುತ್ತೇವೆ ಎಂಬ ಭರವಸೆ ನನಗಿದೆ .  


ಉಪಸಂಹಾರ : ಗೆಳೆಯ ಸಮೀರ್ ನ  ೨೦ನೇ ಜನುಮ ದಿನದಂದು ಏನಾದರು ಕೊಡಬೇಕೆಂದನಿಸಿತು . ಗೆಳೆಯನ ಮನೆಗೆ ನುಗ್ಗಿ ಕೇಕ್ ಕತ್ತರಿಸಿ ಮುಖಕ್ಕೆ ಕ್ರೀಮ್ ಬಳಿಯುವುದು , ಮುಖ ಪುಸ್ತಕದಲ್ಲಿ " Had an awesome day with chinnu ... Love ya ... Mwah ... !!  Munnu you missed it !!  " ಎಂದೆಲ್ಲಾ ಬರೆಯುವುದು - ಇಂತಹ ಒಳ್ಳೇ ಅಭ್ಯಾಸ ಯಾವುದೂ ನನಗೆ ತಿಳಿದಿಲ್ಲ . ಸರಿ , ಏನು ಮಾಡೋದು ಎಂದು ಆಲೊಚಿಸುತ್ತಾ ... ಮೈಕೊರೆಯುವ ಚಳಿಯಲ್ಲಿ ಬಿಸಿ-ಬಿಸಿ ಕಾಫಿ ಹೀರುತಲಿದ್ದೆ . ಆಗ , ಗೆಳೆಯನ ಬಗ್ಗೆ ಒಂದು ಕಿರು ಅಂಕಣವನ್ನು ಬರೆದು , ಆತನ ಜನುಮದಿನದ ನೆನಪಿನ ಕಾಣಿಕೆಯಾಗಿ ಯಾಕೆ ನೀಡಬಾರದು ಎಂಬ ಯೊಚನೆ ಥಟ್ ಅಂತ ಹೊಳೆಯಿತು. ಕಾಫಿ ಕೊಟ್ಟ ಐಡಿಯಾ ಗೆ ವಂದಿಸಿ ಮಿತ್ರನ ಬಗ್ಗೆ ನನಗೆ ತೋಚಿದ್ದನ್ನು ಗೀಚಲು  ಶುರುಮಾಡಿದೆ .....    






ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು ಗೆಳೆಯ !! ನಿನ್ನ ಆಸೆ-ಆಕಾಂಕ್ಷೆಗಳು ಈಡೇರಿ , ಈ ಪೈಪೋಟಿಯ ಬದುಕಿನ ಮಜಲುಗಳನ್ನು ಯಶಸ್ವಿಯಾಗಿ ದಾಟುತ್ತಾ , ನೆಮ್ಮದಿ ಕಾಣುತ್ತಾ , ಇನ್ನೂ ನೂರಾರು ವಸಂತಗಳನ್ನು ಕಾಣುವಂತಾಗಲಿ ಎಂದು  ಭಗವಂತನಲ್ಲಿ ಪ್ರಾರ್ಥಿಸುತ್ತೇನೆ  ....


ನಮಸ್ಕಾರಗಳೊಂದಿಗೆ ...





Thursday 25 August 2011

"ಗುಂಡೈಯ್ಯಂಗಾರಿಯ ಗೋಕುಲಾಷ್ಟಮಿ" ನಮ್ಮಲ್ಲಿ ವಿಚಾರ ಕ್ರಾಂತಿಯನ್ನು ಎಬ್ಬಿಸಲಿ !! :)

ರಜೇಗೆಂದು ಹೈದರಾಬಾದ್ ಗೆ ಹೋಗಿದ್ದ ಗುಂಡ, ಬೆಂಗಳೂರಿಗೆ ಹೊರಡುವ ರಾತ್ರಿಯ ರೈಲನ್ನು ಹತ್ತಿದ . ಗುಂಡ ವಿಶ್ಲೇಷಣಾ ಮನೊಭಾವ ಉಳ್ಳವನಾದ್ದರಿಂದ , ಆತ ರೈಲಿನಲ್ಲಿ ವಿವಿಧ ಸಹ ಪ್ರಯಾಣಿಕರನ್ನು ಗಮನಿಸುತ್ತ ಅವರ ಹಾವ-ಭಾವ-ಚಹರೆಯನ್ನು ದೃಷ್ಟಿಸುತ್ತ ಮನಸ್ಸಿನಲ್ಲಿಯೇ ಅವರ ಬಗ್ಗೆ ಲೆಕ್ಕಾಚಾರ ಹಾಕ ತೊಡಗಿದ . ಅಷ್ಟರಲ್ಲಿ  ಗುಂಡನ ಸಂಚಾರ ದೂರವಾಣಿಗೆ ಬಂದ ಒಂದು ಕಿರು ಸಂದೇಶ ಹೀಗಿತ್ತು " Wish You Happy Janmashtami In Advance ". ತಕ್ಷಣವೇ ಯಾರು ಕಳುಹಿಸಿದರು ಎಂಬುದನ್ನೂ ನೋಡದೇ ಗುಂಡ ಸಾರಾಸಗಟಾಗಿ ಬಂದ ನಂಬರಿಗೆ "Thank You .... Wish You The Same... " ಎಂಬ ಸಂದೇಶವನ್ನು ಕಳುಹಿಸಿಬಿಟ್ಟ . ಆದರೆ ಗುಂಡ ಕಳುಹಿಸಿದ ಮೆಸೇಜ್ ಪ್ರೀತಿ-ವಿಶ್ವಾಸದ ದ್ಯೋತಕವಾಗಿರಲಿಲ್ಲ, ಬದಲಿಗೆ " ರಿಪ್ಲೈ ಮಾಡಬೇಕಲ್ವ ?" ಎಂಬ ಶಾಸ್ತ್ರವನ್ನು ಬಲವಂತವಾಗಿ ಪಾಲಿಸುವುದರ ಪ್ರತೀಕವಾಗಿತ್ತು .

ಹೀಗೆ ಪ್ರಯಾಣ ಸಾಗುತಿತ್ತು . ಗುಂಡ ರೈಲಿನಲ್ಲಿ ಊಟ ಮುಗಿಸಿ  ಮಲಗುವ ತಯಾರಿ ನಡೆಸಿದ . ಅಷ್ಟರಲ್ಲಿ ಗುಂಡನ ದೂರವಾಣಿಗೆ ತನ್ನ ತಾಯಿಯಿಂದ ಒಂದು ಕರೆ ...

ತಾಯಿ-ಊಟ ಆಯ್ತ ? ಟ್ರೈನ್ ಎಲ್ಲಿದೆ ?
ಗುಂಡ- ಆಯಿತು .... ಟ್ರೈನ್ ಹೈದರಾಬಾದ್ ಬಿಟ್ಟು ಮುಕ್ಕಾಲು ಗಂಟೆ ಆಯಿತು ....
ತಾಯಿ - ಸರಿ , ನಾಳೆ ಗೋಕುಲಾಷ್ಟಮಿ !! ಮರೀಬೇಡ .... ಬೆಳಿಗ್ಗೆ ರೈಲ್ವೇ ಸ್ಟೇಷನ್ ನಿಂದ ಸೀದ ಮನೆಗೆ ಬಂದು ಸ್ನಾನ-ಸಂಧ್ಯಾವಂದನೆ ಮುಗಿಸಿ ... ಮನೆ ಮುಂದೆ ಮತ್ತು ದೇವರ ಮನೆಗೆ ಮಾವಿನ ಎಲೆ ಕಟ್ಟಬೇಕು  .
ಗುಂಡ- ಸರಿ ಮಾ .... ನಾಳೆ ಊಟಕ್ಕೆ ಏನು ಸ್ಪೆಷಲ್ಲು ?
ತಾಯಿ - ಮನೆಗೆ ಬಾ ... ಆಮೇಲೆ ಹೇಳ್ತೀನಿ . ಟ್ರೈನ್ ನಲ್ಲಿ ಪರ್ಸ್ ಹುಷಾರು ..... ಮಲಗಬೇಕಾದರೆ ಲಗ್ಗೆಜ್ ಅನ್ನು ಪಕ್ಕದಲ್ಲೇ ಇಟ್ಟುಕೋ ..... ಗುಡ್ ನೈಟ್ ...

ಗುಂಡ - ಅಯ್ಯೋ .... ಚಿಕ್ಕ ಮಕ್ಕಳಿಗೆ ಹೇಳುವ ತರಹ ಹೇಳುತ್ತಿದ್ದೀರಲ್ಲ ಮಾ ... Now I am "grown up" !!  ಗುಡ್ ನೈಟ್ ...


ಸೊಳ್ಳೆ-ತಿಗಣೆಗಳ ಕಾಟವೋ ಅಥವಾ ಗೊಕುಲಾಷ್ಟಮಿಯನ್ನು ನೆನಪಿಸಿದ  ಅಮ್ಮನ ಕರೆಯೋ ಗೊತ್ತಿಲ್ಲ - ಗುಂಡನಿಗೆ ನಿದ್ರಾ ದೇವಿ ಒಲಿಯಲಿಲ್ಲ , ಬದಲಿಗೆ ಗುಂಡ ಯೊಚನಾ ಲಹರಿಯಲ್ಲಿ ತೇಲಿ ಹೋದ.... ತನ್ನ ಇತಿಹಾಸದ ಪುಟಗಳಲ್ಲಿ ಸುವರ್ಣಾಕ್ಷರದಲ್ಲಿ ಬರೆದಿದ್ದ , ೧೦-೧೫ ವರ್ಷಗಳ ಹಿಂದಿನ ಕೃಷ್ಣ ಜನ್ಮಾಷ್ಟಮಿಯ ದಿನಗಳನ್ನು ನೆನಪಿಸಿಕೊಂದ .

ಆಗಿನ ಕೃಷ್ಣ ಜನ್ಮಾಷ್ಟಮಿಯ ದಿನಗಳಲ್ಲಿ ಗುಂಡ ಐಯ್ಯಂಗಾರಿಯ ಮನೆಯಲ್ಲಿ ಸಂಭ್ರಮವೋ-ಸಂಭ್ರಮ. ಹತ್ತಿರದ ದೂರದ ನೆಂಟರಿಷ್ಟರೂ ಸೇರಿದಂತೆ, ಹಲವಾರು ಮಂದಿ ಸಂಬಂಧಿಕರು  ಗುಂಡನ ತಾತನ ಮನೆಯಲ್ಲಿ ಸೇರಿರುತ್ತಿದ್ದರು . ಗುಂಡ ತನ್ನ ಅಕ್ಕಂದಿರೊಡನೆ, ಅಣ್ಣ-ತಮ್ಮಂದಿರೊಡನೆ ಹಬ್ಬದ ತಯಾರಿಯಲ್ಲಿ ತೊಡಗಿಸಿಕೊಳ್ಳೂತಿದ್ದ ಪರಿಯನ್ನು , ಇನ್ನೂ ಆತ ಮರೆತಿಲ್ಲ . ಶಾಲೆಗೆ ಚಕ್ಕರ್  ಹೊಡೆದು ( ರಜೇ ಕೊಡದೇ ಹೋದ ಸಂದರ್ಭದಲ್ಲಿ ) ಮನೆಯಲ್ಲಿ ಪಸರಿಸಿರುವ ಸಡಗರದ ವಾತಾವರಣಕ್ಕೆ ಸಾಕ್ಷಿಯಾಗಿರುತ್ತಿದ್ದ . ಎಂದಿನಂತೆ, ಅವತ್ತಿನ ದಿನವೂ ಅವನ ಅಜ್ಜಿಯೇ ಸ್ನಾನಾದಿ ಇತರೇ ನಿತ್ಯ ಕರ್ಮಗಳನ್ನು ಬೇಗ ಮುಗಿಸಿ ದೇವರಿಗೆ " ಶಿಟ್ರಮ್ ,ಶಿರುಗಾಲೈ ವಂದು ಉನ್ನೈ ಚೇವಿತ್ತು" ( ತಿರುಪ್ಪಾವೈ - ೨೯) ಎಂದು ಹಾಡಿ-ಹೊಗಳಿ ,ತಾತ ಮಾಡುವ ದೇವರ ಆರಾಧನೆಯ ಸಿದ್ಧತೆಯಲ್ಲಿ ಸಹಾಯ ಮಾಡುತ್ತಿದ್ದರು. ಅದೇ ಸಮಯಕ್ಕೆ ಮನೆಯ ಹೊರಾಂಗಣದಲ್ಲಿ ಮನೆಯ ಹೆಂಗಸರು ಬಣ್ಣ-ಬಣ್ಣದ ರಂಗವಲ್ಲಿಯನ್ನು ಅದ್ಭುತವಾಗಿಟ್ಟು ,ನೆರೆ-ಹೊರೆಯವರು ನಿಬ್ಬೆರಗಾಗುವಂತೆ ಮಾಡುತ್ತಿದ್ದರು .ಅಷ್ಟು ಹೊತ್ತಿಗೆ ತಾತನವರು ಸ್ನಾನ ಮುಗಿಸಿ ,ಹಣೆಯ ಮೇಲೆ "ಮೂರು ನಾಮವನ್ನು" ನಿಧಾನವಾಗಿ-ಜಾಣ್ಮೆಯಿಂದ ಇಟ್ಟುಕೊಳ್ಳುತ್ತಿದ್ದ ರೀತಿ ,ಗುಂಡನಿಗೆ ಆಶ್ಚರ್ಯದ ನಗು ತರಿಸುತ್ತಿತ್ತು . ಗುಂಡ ಮುಂತಾದ ಹುಡುಗರು ತಮ್ಮ ಸ್ನಾನಾದಿ ಕರ್ಮಗಳನ್ನು ಮುಗಿಸಿ ಸ್ಪರ್ಧಾತ್ಮಕವಾಗಿ ಮನೆಯ ಮುಂದೆ , ದೇವರ ಮನೆಗೆ ಹಚ್ಚ ಹಸಿರು ಮಾವಿನ ಎಲೆಗಳನ್ನು ಬೇಗ-ಬೇಗ ಕಟ್ಟಿ,ತಂದೆ-ತಾಯಿಯವರಲ್ಲಿ "ಭೇಷ್" ಎನಿಸಿಕೊಳ್ಳುವುದು ಅವರಿಗೆ ಅತಿ ಮುಖ್ಯವಾಗಿತ್ತು. ಅಷ್ಟರಲ್ಲಿ ಗುಂಡನ ತಾತನವರ ಆರಾಧನೆಯೂ ಮುಗಿದಿರುತ್ತಿತ್ತು .

ತಿಂಡಿಯ ನಂತರ ಕೃಷ್ಣನ ಮಂಟಪ ಕಟ್ಟುವುದಕ್ಕೆ ಸರ್ವರೂ ಸಂತೋಷದಿಂದ ತಮ್ಮ ಕೈಲಾದಷ್ಟು ಸಹಾಯ ಮಾಡುತ್ತಿದ್ದರು. ಮಂಟಪಕ್ಕೆ  ,ಅಡುಗೆಗೆ ಬೆಕಾದ ಸಾಮಾನುಗಳನ್ನೂ ಮತ್ತು ಅವರಿಗೆ ಬೇಕಾದ ಇನ್ನಿತರ ಪದಾರ್ಥಗಳನ್ನೂ ಎಂದಿನಂತೆ (ಅಂದು-ಇಂದು-ಎಂದೆಂದು) "ಮಲ್ಲೇಶ್ವರಂ" ಒದಗಿಸುತ್ತಿತ್ತು .

ಕೆಲವು ಹಿರಿಯರ ಮುಂದಾಳತ್ವದಲ್ಲಿ, ಗುಂಡನೂ ಸೇರಿದಂತೆ ಹಲವಾರು ಪುಟಾಣಿ ಮಕ್ಕಳು ಚಾಕಚಕ್ಯತೆಯಿಂದ ಮಂಟಪದಲ್ಲಿ ಇಟ್ಟಿರುವ ಕೃಷ್ಣನ ವಿಗ್ರದ ಸುತ್ತಲೂ ಚಕ್ಕುಲಿ,ಮುಚ್ಚೇರು,ತೇಂಗೋಳ್,ರವೆ ಉಂಡೆ,ಪೊರಿ ಉಂಡೆ,ಕೊಬ್ಬರಿ ಮಿಟಾಯಿ ಮುಂತಾದ ತಿಂಡಿ ತಿನಸುಗಳನ್ನೂ ವಿವಿಧ ಹಣ್ಣುಗಳನ್ನೂ ದಾರದ ಸಹಾಯದಿಂದ ಕಟ್ಟುತ್ತಿದ್ದರು .ನಂತರ ಗುಂಡನ ತಂದೆಯವರು ಮಂಟಪವನ್ನು ಸಣ್ಣ ವಿದ್ಯುತ್ ಬಲ್ಬು ಗಳಿಂದ ಅಲಂಕರಿಸಲು-ಅದು ಮಂಟಪದ ಮೆರಗನ್ನು ಇಮ್ಮಡಿಗೊಳಿಸುತ್ತಿತ್ತು.ವಿದ್ಯುತ್ತಿನ ಸಹಾಯದಿಂದ, ಆ ಕೃಷ್ಣ ಮಂಟಪವು ಎಲ್ಲರನ್ನು ಮಂತ್ರ ಮುಗ್ದರನ್ನಾಗಿಸುತ್ತಿತ್ತು. ಒಟ್ಟಿನಲ್ಲಿ ಆ ನಿರ್ಜೀವ ವಿಗ್ರಹಕ್ಕೆ " ಜೀವ ಬಂದಿದಿಯೆನೋ " ಎಂಬಂತೆ ಗೋಚರಿಸುತ್ತಿತ್ತು .ಇದನೆಲ್ಲಾ ಕಂಡ ಗುಂಡ ಮುಂತಾದ ಮಕ್ಕಳಿಗೆ ಎಲ್ಲಿಲ್ಲಿದ ಉತ್ಸಾಹ-ಆನಂದ .ನಂತರ ಮನೆಯ ಹಿರಿಯರು ಮಂಟಪದ ಆ "ಜೀವಂತ ಕೃಷ್ಣ"ನಿಗೆ ಪೂಜಾ ವಿಧಿ-ವಿಧಾನಗಳನ್ನು ಮುಗಿಸಿ,ಹೆಂಗಸರು ಕೃಷ್ಣನ ಸ್ತೊತ್ರಾವಳಿಗಳನ್ನೂ, ಕೃಷ್ಣನ ಹಾಡುಗಳನ್ನೂ ಹಾಡಿ, ರಾತ್ರಿಯ ಊಟಕ್ಕೆ ಆಣಿಗೊಳಿಸುತ್ತಿದ್ದರು .

ಗುಂಡಯ್ಯಂಗಾರಿಯ ಮನೆಯಲ್ಲಿ ಗೋಕುಲಾಷ್ಟಮಿಯ ರಾತ್ರಿಯ ಭೋಜನ ಬಲು ಜೋರಾಗಿರುತ್ತಿತ್ತು. ಸುಮಾರು ೧೫ ಮಂದಿ ನೆಂಟರು ಒಟ್ಟಾಗಿ ಊಟಕ್ಕೆ ಕುಳಿತುಕೊಳ್ಳುತ್ತಿದ್ದರು . ಪುರೋಹಿತರ ಮನೆಯ ಮಗಳಾಗಿದ್ದ ಗುಂಡನ ಅಜ್ಜಿಯ ನೇತೃತ್ವದಲ್ಲಿ , ಮಡಿಯಿಂದ ಕೃಷ್ಣನಿಗೆ ಸಮರ್ಪಿತವಾಗಿದ್ದ ಎಲ್ಲ ಭಕ್ಷ್ಯ-ಭೋಜನಗಳು ಎಲೆಯ ಮೇಲೆ ಒಂದೊಂದಾಗಿ ಕಾಣಿಸಲಾರಂಭಿಸುತ್ತಿದ್ದವು . ಊಟದ ಮಧ್ಯೆ ತರಹ-ವಿಚಿತ್ರ ಚರ್ಚೆ . ಮಕ್ಕಳ ನಡುವೆ ನಡೆಯುತ್ತಿದ್ದ ವಾದದ ಬಿರುಸು ಹೆಚ್ಚಾದಾಗ ಕಾಣುತ್ತಿದ್ದ " ಪೋಡಾಡೈ ... !!" , " ಅಯ್ಯೋ ಪೋಡಿ ... " ಎಂಬ ಕೋಪದ ಮಾತುಗಳು . ಆಗ ದೊಡ್ಡವರು ಸಮಾಧಾನ ಪಡಿಸುತ್ತಿದ್ದ ರೀತಿ ಯಾವುದನ್ನೂ ಗುಂಡ ಮರೆತಿಲ್ಲ . ಹೀಗೆ ಕೊಳಕಟ್ಟೇ ( ಕನ್ನಡಲ್ಲಿ ಮೋದಕ ಅಂತ ಕೆಲವರು ಕರೆಯುತ್ತಾರೆ .... ಎಷ್ಟು ಸರಿಯೋ ನನಗೆ ಗೊತ್ತಿಲ್ಲ ),ಪಾಯಸ,ಅಪ್ಪಮ್ ಮುಂತಾದ ಸಿಹಿ ಪದಾರ್ಥಗಳನ್ನೊಳಗೊಂಡ ಊಟದ ಕಡೆಯ ಹಂತಕ್ಕೆ , ಅಂದರೇ ಅನ್ನ-ಮೊಸರು ಬಡಿಸುವ ಮೊದಲೇ ಹಲವಾರು ಮಂದಿ "Bold" ಆಗಿರುತ್ತಿದ್ದರು . ಒಮ್ಮೆ ಹೀಗೆ, ಗುಂಡ ಊಟ ಹೆಚ್ಚಾಗಿ ಮಧ್ಯೆ ಎದ್ದು ಹೋಗುವ ಪ್ರಯತ್ನ ಮಾಡಿದಾಗ .... ಗುಂಡನ ಮಾವನವರು ( ಗುಂಡನ ತಾತನವರ ಕಡೆಗೆ ಕೈ ತೋರಿಸುತ್ತ ) " ದೊಡ್ಡವರು ಊಟ ಮುಗಿಸಿ ಏಳುವವರೆಗೂ ,ಚಿಕ್ಕವರಾದ ನಾವು ಏಳುವಂತಿಲ್ಲ !! ತಿಳಿಯಿತೇ ? " ಎಂದು ಹೇಳಿರುವ ಬುದ್ಧಿಮಾತನ್ನೂ ಗುಂಡ ಮರೆತಿರುವುದಕ್ಕೆ ಸಾಧ್ಯವಿಲ್ಲ . ಊಟದ ನಂತರ ಹಿರಿಯರು ಎಲೆ-ಅಡಿಕೆ ಹಾಕಿ ,ಸಂಪ್ರದಾಯದ ಮಾತುಗಳನ್ನು ಆಡಿ, ಮಂಟಪದ ಕೃಷ್ಣನಿಗೆ ಪುನಃ ವಂದಿಸಿ ,ಪರಸ್ಪರ ಬೀಳ್ಕೊಡುತ್ತಿದ್ದರು . ಹೀಗೆ , ಗುಂಡನ ಮನೆಯ ಪ್ರತಿಯೊಬ್ಬರು " ಮುಂದಿನ ಜನ್ಮಾಷ್ಟಮಿ ಯಾವಾಗ ಬರುತ್ತದೋ ?" ಎಂದು ಕಾತುರದಿಂದ ಕಾಯುವಂತೆ ಮಾಡುತ್ತಿತ್ತು ಅಂದಿನ ಜನ್ಮಾಷ್ಟಮಿ. ಇದಕೆಲ್ಲಾ ಅಂದು ಸುರಿಯುತ್ತಿದ "ರೋಹಿಣಿ ಮಳೆ"ಯೇ ಸಾಕ್ಷಿಯಾಗಿರುತ್ತಿತ್ತು .( ಕೃಷ್ಣ ಹುಟ್ಟಿದ್ದು ರೋಹಿಣಿ ನಕ್ಷತ್ರದಂದು ಎಂಬುದು ಜನರಲ್ಲಿರುವ ಒಂದು ನಂಬಿಕೆ ) 

ಹೀಗೆ ರೈಲಿನಲ್ಲಿ ಯೋಚಿಸುತ್ತಾ ಗುಂಡ ನಿದ್ರಾಪರವಶನಾದ .ಬೆಳಿಗ್ಗೆ ರೈಲು ಬೆಂಗಳೂರಿಗೆ ಬಂದ ತಕ್ಷಣ ಅಮ್ಮನ ಆಣತಿಯಂತೆ ಸೀದಾ ಮನೆಗೆ ಬಂದ. ಸ್ನಾನಾದಿ ಕರ್ಮಗಳನ್ನು ಮುಗಿಸಿ ಮನೆಯ ಬಾಗಿಲಿಗೆ ಮತ್ತು ದೇವರ ಕೋಣೆಯ ಬಾಗಿಲಿಗೆ ಮಾವಿನ ಎಲೆಗಳನ್ನು "ತಾಯಿಯ ಬಲವಂತದ ಮೇರೆಗೆ" ಕಟ್ಟುತ್ತಾ ,ಹಿಂದಿನ ರಾತ್ರಿ ರೈಲಿನಲ್ಲಿ ಯೋಚಿಸಿದ್ದ ೧೦-೧೫ ವರ್ಷದ ಹಿಂದಿನ ಜನ್ಮಾಷ್ಟಮಿ ಹಬ್ಬದ ಸಡಗರವನ್ನು ಪುನಃ ನೆನಪಿಸಿಕೊಂಡು ಆಗಿರುವ ಬದಲಾವಣೆಗಳನ್ನು ಗಮನಿಸಿದ .


ಅಂದೂ ಹಿರಿಯರು ಲವಲವಿಕೆ ಇಂದ ಇರುತ್ತಿದ್ದರು. ಇಂದೂ ಕೂಡ ಗುಂಡನ ಅಜ್ಜಿ "ಎಂದೈ ತಂದೈ ತಂದೈ ,ತಂದೈ ತಮ್ಮೂತ್ತಪ್ಪನ್ ,ಏಳ್ಪಡಿಗಾಲ್ ತೊಡಂಗಿ ವಂದು ವಳಿವಳಿಯಾಯಿ ಚೇಹಿನ್ರೋಮ್ " ( ತಿರುಪಲ್ಲಾಂಡು - ೬) ಎಂಬ ಮಾತಿನಲ್ಲಿ ಅಡಗಿರುವ ಭಕ್ತಿಯಂತೆ ಈಗಲೂ ಕೃಷ್ಣನಿಗೆ ಮಡಿಯಿಂದ ಭಕ್ಶ್ಯ-ಭೋಜನಗಳನ್ನು ಸಿದ್ಧಪಡಿಸುತ್ತಿದ್ದಾರೆ . ಗುಂಡನ ತಾತ ಈ ಇಳಿ ವಯಸ್ಸಿನಲ್ಲೂ ಪೂಜೆ ಸಲಿಸುತ್ತಿದ್ದಾರೆ. ಆದರೆ, ಅಂದು ಇದ್ದ ಸಂಭ್ರಮದ ವಾತಾವರಣ ಇಂದು ಏಕೋ ಗುಂಡನಿಗೆ ಕಾಣುತ್ತಿಲ್ಲವಂತೆ . ಗುಂಡನ ಅಣ್ಣ-ಅಕ್ಕಂದಿರಿಗೆ ಅವರದೇ ಸಂಸಾರದ ತಾಪತ್ರಯಗಳು,ಆಫೀಸಿನ ಅಡಚಣೆಗಳು - ಇವೇ ಮುಂತಾಂದವುಗಳು ದೊಡ್ಡ ಕೆಲಸವೆಂದು ಪರಿಣಮಿಸಿರುವಾಗ , ಇನ್ನು ಕೃಷ್ಣ ಜನ್ಮಾಷ್ಟಮಿಯ ದಿನ ಅವರಿಗೆ ಒಂದು ದಿನ ರಜೇ ಬೇಕೆ ಹೊರತು , ಗುಂಡನ ಮನೆಯಲ್ಲಿ ಸೇರಿ "ಕೃಷ್ಣ ಮಂಟಪ"ವನ್ನು ಕಟ್ಟಿ,ಭೋಜನದಲ್ಲಿ ಪಾಲ್ಗೊಳ್ಳುವುದು ದೂರದ ಮಾತು .


 ( ಅಂದು ಹಿರಿಯರು ತಮ್ಮ ಕಷ್ಟ-ಕಾರ್ಪಣ್ಯಗಳ ನಡುವೆಯೇ , ನಮ್ಮ ಸಂಸ್ಕೃತಿಯನ್ನು ಎತ್ತಿ ಹಿಡಿಯುವ ಹಬ್ಬಗಳನ್ನು ಹೇಗೆ ಆಚರಿಸುತ್ತಿದ್ದರು ?  ) 

ಹಾಗಾದರೇ, ಹದಿನೈದು ವರ್ಷದ ಹಿಂದಿನ ಗುಂಡನಿಗೂ ಈಗಿರುವ ಗುಂಡನಿಗೂ ಬದಲಾವಣೆ ಆಗಿಲ್ಲವೇ ಎಂಬ ನಿಮ್ಮ ಪ್ರಶ್ನೆಗೆ ನನ್ನ ಸರಳ ಉತ್ತರ " ಖಂಡಿತ ... ಬದಲಾಗಿದ್ದಾನೆ". ಆಗ 'ಪುಟಾಣಿ ಗುಂಡ'ನಿಗೆ ಪ್ರತಿಯೊಂದು ಕೆಲಸದಲ್ಲಿಯೂ ಶ್ರದ್ಧೆ ಮತ್ತು ಉತ್ಸುಕತೆ ಇರುತ್ತಿತ್ತು . ಆದರೆ ಈಗಿನ 'ಪದವಿ ಓದುತ್ತಿರುವ ಗುಂಡ'ನಿಗೆ ತನ್ನ ಕೆಲಸಗಳು ಮಾತ್ರ "Cool and Interesting " ಮತ್ತು ಇನ್ನಿತರೇ ಕೆಲಸಗಳು " Quite Boring " ಎಂಬ ಮನಸ್ಥಿತಿಯನ್ನು ತಾಳಿದ್ದಾನೆ. ಸಂಸ್ಕೃತಿ ಉಳಿಸಿ ಸಂಪ್ರದಾಯವನ್ನು ಪಾಲಿಸುವುದು ತನ್ನ ಬೌದ್ಧಿಕ ಬೆಳವಣಿಗೆಗೆ ಅಗೌರವ ಸೂಚಿಸಿದಂತೆ ಎಂಬ ತಪ್ಪು ವಾದಕ್ಕೆ ಅಂಟಿಕೊಂಡಿದ್ದಾನೆ .


ಹಾಗಾಗಿ ಅಂದು ಆತನಿಗೆ ಹಚ್ಚ-ಹಸಿರುಗಳಿಂದ ಕಂಗೊಳಿಸುತ್ತಿದ್ದ ಆ ಮಾವಿನ ಎಲೆಗಳು,ಇಂದು ಕೇವಲ ನಿರ್ಜೀವ ಎಲೆಗಳಾಗಿ ಕಾಣುತ್ತಿವೆ.ಅಂದು ಉತ್ಸುಕತೆಯಿಂದ ಕೂಡಿರುತ್ತಿದ್ದ ಮಂಟಪದ ಕೆಲಸ, ಇಂದು "Some Shit !!" ಎಂದು ಕಡೆಗಣಿಸಿ ಆ ಕೆಲಸವನ್ನೇ ನಿಲ್ಲಿಸಿಬಿಟ್ಟಿದ್ದಾನೆ.ಅಂದು ನೆಂಟರ ನಡುವೆ ಇರುವ ಭಾಂಧವ್ಯತೆಯ ಸಂಕೇತವಾಗಿದ್ದ ಜನ್ಮಾಷ್ಟಮಿಯು , ಇಂದು ಕೇವಲ ಒಂದು ರಜಾ ದಿನಕ್ಕೆ ಸೀಮಿತವಾಗಿದೆ. ಇವತ್ತಿನ ಈ ಗುಂಡನ ಪರಿಸ್ಥಿತಿಗೂ ಆ ಮಳೆಯೇ ಸಾಕ್ಷಿ .ಅಂದು  ಗುಂಡನಿಗೆ ಜನ್ಮಾಷ್ಟಮಿಯ ಆ ಮಳೆ ಮುದ ತರಿಸುತ್ತಿತ್ತು . ಆದರೆ ಇಂದು ಅದು " Stupid And Useless Rain " ಆಗಿ ಗೊಚರಿಸುತ್ತಿದೆ .


- ಹೀಗೆ ಗುಂಡನ ಇಂದಿನ ಜನ್ಮಾಷ್ಟಮಿಯು ಸ್ವಾರಸ್ಯವಿಲ್ಲದೇ ಸಾಧಾರಣವಾಗಿ ಸಾಗಿತು .


ಕಡೆಯ ಮಾತು : ಇಲ್ಲಿ "ಗುಂಡೈಯ್ಯಂಗಾರಿ" ಮತ್ತು "ಜನ್ಮಾಷ್ಟಮಿ"( ಕೆಲವು ಕಡೆ ಗೊಕುಲಾಷ್ಟಮಿ ಎಂದು ಬಳಸಿರಬಹುದು) ಎಂಬುದು, ನನ್ನನ್ನೂ ಒಳಗೊಂಡ ಈಗಿನ ಯುವಕ-ಯುವತಿಯರ ಮತ್ತು ಭವ್ಯ ಸಂಸ್ಕೃತಿಯನ್ನು ಸಾಂಕೇತಿಕವಾಗಿ ಪ್ರತಿನಿಧಿಸುತ್ತದೆ ಅಷ್ಟೆ .ಇದೂ ಯಾರದೇ ವೈಯುಕ್ತಿಕ ವಿಚಾರಗಳಿಗೆ ಸೀಮಿತವಲ್ಲ. ನಮ್ಮ ಕಥಾ ನಾಯಕ ಗುಂಡನ ಕೆಲವು ಗುಣಗಳಾದರೂ ಈಗಿನ ಪ್ರತಿಯೊಬ್ಬ ಯುವಕ-ಯುವತಿಯರಲ್ಲೂ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಕಾಣಬಹುದು ಎಂಬುದು ನನ್ನ ಅಭಿಪ್ರಾಯ . ಹೀಗೆ ಈ ದೃಷ್ಟಾಂತದ ಸಾರವನ್ನು ತಿಳಿದ ನಂತರ ನಮ್ಮ ಮನಸ್ಸಿನಲ್ಲಿ , " ಇದೆಲ್ಲವೂ ಗುಂಡನ ( ಗುಂಡ ಈಗಿನ ಆಧುನಿಕ ಯುವಕ-ಯುವತಿಯರನ್ನು ಪ್ರತಿನಿಧಿಸುತ್ತಾನೆ ಎಂಬುದನ್ನು ಮರೆಯಬಾರದು ) ತಪ್ಪೇ ?" ," ಇವೆಲ್ಲಾ ನಮ್ಮ ಆಧುನಿಕ ಯುವಕ-ಯುವತಿಯರ ವಯೋ ಸಹಜ ಧರ್ಮವೇ ಎಂದು ನಿರ್ಲಕ್ಷಿಸಬಹುದೇ ? ಹಾಗೆ ನಿರ್ಲಕ್ಷಿಸಿದರೆ ನಮ್ಮ ಭವ್ಯ ಸಂಸ್ಕೃತಿಗೆ ಬೆಲೆಯೇ ಇಲ್ಲವೇ ? " , " ಗುಂಡನೇ ಮೊದಲಾದ ಯುವಕ-ಯುವತಿಯರ ಜೀವನದಲ್ಲಿ ಹೆಚ್ಚಾದ ತಾಂತ್ರಿಕತೆ ಅವರನ್ನು ಜೀವನದ ಇತರೇ ಆಯಾಮದ ಕಡೆಗೆ ಒಂದು ಗೋಡೆಯನ್ನು ನಿರ್ಮಿಸಿ, ಯಾಂತ್ರಿಕ ಬದುಕನ್ನು ಸಾಗಿಸಲು ಪ್ರೇರೇಪಿಸುತ್ತಿದಿಯೇ ? " ," ಪಾಶ್ಚಾತ್ಯರನ್ನು ಸಂಪೂರ್ಣವಾಗಿ ಅನುಕರಿಸಲು ಹೋಗಿ ನಾವು ದಾರಿ ತಪ್ಪುತ್ತಿದ್ದೇವೆಯೇ ?" , ಅಥವಾ " ಇವೆಲವನ್ನೂ ತಿಳಿದು ALL IZZ WELL ಎಂದು ಸುಮ್ಮನೆ ಕೂರುವುದು ಸಮಂಜಸವೇ ?" - ಇವೇ ಮೊದಲಾದ ಪ್ರಶ್ನೆಗಳು ನಮ್ಮ ಯುವಕ-ಯುವತಿಯರಲ್ಲಿ ಉದ್ಭವಿಸಿ , ಅವರಲ್ಲಿ "ವಿಚಾರ ಕ್ರಾಂತಿ"ಯನ್ನು ಎಬ್ಬಿಸುವಂತಾಗಲಿ ಎಂಬುದೇ ನನ್ನ ಈ ಅಂಕಣದ ಸದುದ್ದೇಶ .... 

ನಮಸ್ಕಾರಗಳೊಂದಿಗೆ ....

( ಮುಕ್ತ ಚರ್ಚೆಗೆ ಸ್ವಾಗತ ) 





Friday 11 March 2011

ಮಾನ್ಯ ಪ್ರಧಾನ ಮಂತ್ರಿಗಳಿಗೆ ನನ್ನ ಮನದಾಳದಿಂದ ಒಂದು ಮುಕ್ತ ಪತ್ರ - ಭಾಗ-೧



















Maanya pradhaana-mantri galige ,
                        Nanna 'vinay'apoorvaka namaskaragalu . Naanu ee ' so called ' prajaaprabhutva deshada , bhavya 'bhaaratha'da obba sri saamaanya . Aadaru tamma bali naanu prati-nitya kaanuttiruva , noduttiruva , anubhavasittiruva halavaaru samasyegala bagge , ee  patrada moolaka nanna buddhi-shakthi ge anugunavaagi , nanna anisikegalannu hanchikollabeku endu anisitu . Desha-Videshadalli odi bandiruva tammantaha medhavige ee nanna patra kshullaka enisidaru , dayavittu swalpa samaya maadikondu omme kannu haaisi Mr.Singh !!!

                                 "India is the cradle of the human race, the birthplace of human speech, the mother of history, the grandmother of legend, and the great grand mother of tradition. Our most valuable and most astrictive materials in the history of man are treasured up in India only !"  endu Americada suprasiddha barahagaara Mark Twain aa kaaladalli 'Bhaaratha'vannu kondaadi barediddare . 


                Halavaaru avataara purusharu - mahaa mahimaru janisida intaha punya bhoomiyalli, 'aitihaasika'vaagi prasiddhavagidda "Nalanda","Takshashila" emba vishvavidyanilayagalu idda ee saraswathi maateya tavaroorinalli , kelage namoodisiruva halavaaru bageya samasyegalu pendam-bhootha aagi kaaduttiruvudu ee 'jambu-dweepa'da paalige duradhrushtakara haagu avamanakara .......... 

1> Education system : 




                                                
                                                 


















Heege Lord Macaulay emba bhoopa , English education shuru maadi namma deshada bennalubu aagidda , puraatana saamskrutika parampareyannu  naasha madiddu tamage gotilve Mr.Singh ? So that we Indians  became " vehicles for European scientific, historical, and literary expression " . Heege sumaaru 176 varushagalinda naavu namma swantike-yannu bittu avaranne himbalisutta hogta iddivi .......

Intaha paristhithiyalli eegina yuvaka-yuvatiyarige namma bhavya bharateeya samskruti -sampradaayagalu,aachaara -vichaara galu hege gottagutte sir ? Idu eegina yuvaka-yuvatiyara tappo athva namma Education System  sari illawo , taavu omme vichaara maadi .....

' Sa vidya ya vimuktaye’ - education is that which has liberation as its aim [ Vishnu Puranam 1.19.41  ] .   ' Knowledge must be transformed into wisdom ' - Einstein ......  Namma eegina Exam-Oriented education eshtara mattige idannu paalisuttide ? 

' Ishta pattu kali , kashta pattalla ' emba maatide . Aadre eega , primary school inda hididu university gala tanaka , vidye-yannu kalisuva vidhaana , parikshaa paddattigalu , vidyaarthigala  manassina mele apaara 'stress' annu untu maaduttide . 

Dine-Dine , maadaka vastugalige mattu innitara duschatagalige namma yuvaka-yuvatiyaru baliyaaguttiruvudu hechhaguttiruvudannu naavu nitya patrike-galalli oduttale iddivi . Idakke namma ee education untu maaduttiruva stress kooda ondu kaarana embudu nanna bhaavane .

Also I happened to read this,  Although schooling is free and compulsory from 6-14 years of age in India , about 35% of world's illiterate population is Indian and, based on historic patterns of literacy growth across the world, India may account for a majority of the world's illiterates by 2020 " . Idakke kaarana enu Mr.PM ?   


2> Reservation policy :


Sir , Nanna vaiyukthika abhipraaya  " Iruvudu onde jaati , adu maanava jaati " ....... 



The framers of the Constitution believed that, due to the caste system, SCs and the STs were historically oppressed and denied respect and equal opportunity in Indian society and were thus under-represented in nation-building activities. The Constitution laid down 15% and 7.5% of vacancies to government aided educational institutes and for jobs in the government/public sector, as reserved quota for the SC and ST candidates respectively for a period of 5 years, after which the situation was to be reviewed.
"


Illi gamanisabekaada kelavu amshagalu :


a> Idaranate ee reservation policy embudu  5 varushagalige maatra seemitavagittu . Nantra " Situation was supposed to be reviewed " . Aadre  aagidda Congress sarkaara-galu ee policy-yannu renew maduttale bandavu ....... Idanne halavaaru pakshagalu tamma aalvike-ya sandharabhadalli anusarisidavu . Yaavude sarkaara-vu ee policy yannu matte parisheelisalilla . Nimma UPA sarkaara-vu idakke horatalla Mr.Singh. Idakella motive  " SC - ST  Vote Bank " looti maaduvudu ashte aagittu alwa ?



b> Poor people from "forward castes" do not have any social or economical advantage over rich people from backward caste. In fact , traditionally Brahmins have been poor. 


[

Not included in original  : 
 Brahmins in India have become a minority.  ( 7 minutes video clip which exposes the reality that today's Brahmins have become oppressed and marginalized ...... )


]


Intaha sandarbhadalli Sri Sri Ramanuja ra jeevana charitre-yalli baruva ondu prasangavannu tilisalebeku endu anisuttide .


Ramanuja proceeded to Thirukottiyur to take initiation from Nambi ( one of Guru's of Ramanuja ) for Japa of the sacred Mantra of eight letters Om Namo Narayanaya. Somehow, Nambi was not willing to initiate Ramanuja easily. He made Ramanuja travel all the way from Srirangam to Madurai nearly eighteen times before he made up his mind to initiate him, and that too, only after exacting solemn promises of secrecy. 


Then Nambi duly initiated Ramanuja and said: "Ramanuja! Keep this Mantra a secret. This Mantra is a powerful one. Those who repeat this Mantra will attain salvation. Give it only to a worthy disciple previously tried". 


But Ramanuja had a very large heart. He was extremely compassionate and his love for humanity was unbounded. He wanted that every man should enjoy the eternal bliss of Lord Narayana. He realised that the Mantra was very powerful. He immediately called all people, irrespective of caste and creed, to assemble before the temple. He stood on top of the tower above the front gate of the temple, and shouted out the sacred Mantra to all of them at the top of his voice. Nambi, his Guru, came to know of this. He became furious. Ramanuja said: "O my beloved Guru! Please prescribe a suitable punishment for my wrong action , I will gladly suffer the tortures of hell myself if millions of people could get salvation by hearing the Mantra through me". Nambi was very much pleased with Ramanuja and found out that he had a very large heart full of compassion .


Idu swami doddavara  lakshana .......  Nanna buddhi-ge tiliduruva mattige , dodda-dodda sadhu-sanyaasi galaagali , mahaapurusharaagali yaaruu , " Ee jaati hesarinalli prachodane madutta iralilla " . 


Intaha gurugalu iddaru saha , ee jaati emba hesarinalli " Mean Minded , Wicked " halavaaru mandi Brahmana-ru  shoshane maadiddu , himsi-siddu , vaada-vivaada galannu srishthi -siddu asahyakara haagu shochaneeya  .........


Aadre , Mr.Singh ...... Yaaro namma " Ancestors"  maadidda  tappige namageke shikshe ? Naavu en tappu maadidivi ? 


Sir , Education- Employment  gali-ge , Merit-Qualification galu mukhyavo ? Athva ee "so called" Jaati mukhyavo ?


Nimmantaha gnani-galige naanu suggestion kodta iddini anta dayavittu tilkobedi . Naanu ati vinaya-dinda , nanna ee manda-buddhi ge enu anisutto adannu tamma bali heltiddini .......


1> Rajakaarana embudu ondu sacred profession alwa ? Neevu ( Raajakaarani-galu ) ee samastha bharatheeyarannu pratinidhisuttiddira . Heegiddaruu neevu, yaake ondu dharmakke , athva ondu janaanga-kke  seemita endu yochisuttira ? Yaake swami ee " Divide and Rule "


2> Neevu " Aadhar " brand name of the Unique Identification number (UID) ) system implement maaduva reetiyalle , yaake pratiyobba Bhaarateeyana Database maintain maadbaardu ? So that , yaaru nijwaaglu hindulidavaru embudu  tiliyuttade . Intaha hindulida janarige ( Irrespective of the caste ) reservation facilities kodi ...... Adu tappagalla Mr.Singh . Howdu, namma Deshada " Jana-sankhyaa Sphota ( Population Explosion ) " idakke adda-gaalu haakabahudu . Aadre , omme ee database system implement aadre , namma deshada halavaaru mukhya samasyegalu muktaaya-golluttade embudu nanna abhipraaya .






                                                                                                             Munduvariyuttade .........